ಪಠಾಣ್ಕೋಟ್ ದಾಳಿ: ಪಾಕಿಸ್ತಾನದ ಪಾತ್ರಕ್ಕೆ ಸಾಕ್ಷ್ಯವಿಲ್ಲ - ಎನ್ಐಎ ಮುಖ್ಯಸ್ಥ!
ನವದೆಹಲಿ,ಜೂ 3 : ಪಠಾಣ್ ಕೋಟ್ ವಾಯು ನೆಲೆ ಮೇಲೆನಡೆದ ದಾಳಿಯಲ್ಲಿಪಾಕಿಸ್ತಾನ ಸರಕಾರ ಅಥವಾ ಏಜನ್ಸಿಗಳ ನೇರಕೈವಾಡವಿದೆಯೆನ್ನುವುದಕ್ಕೆ ಇಲ್ಲಿಯ ತನಕ ಯಾವ ಸಾಕ್ಷ್ಯವೂ ದೊರೆತಿಲ್ಲ, ಎಂದುಎನ್ ಐ ಎ ಮಹಾನಿರ್ದೇಶಕಶರದ್ ಕುಮಾರ್ ಹೇಳಿದ್ದಾರೆ. ಪಾಕಿಸ್ತಾನ ಸರಕಾರ ಜೈಶ್-ಇ-ಮೊಹಮ್ಮದ್ಅಥವಾ ಮಸೂದ್ ಅಝರ್ ಗೆಈದಾಳಿ ನಡೆಸಲು ಸಹಾಯ ಮಾಡಿದೆಯೆನ್ನುವುದಕ್ಕೂ ಸಾಕ್ಷ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ದಳ ಭಾರತದಲ್ಲಿ ತನ್ನ ತನಿಖೆ ಮುಗಿಸಿದ್ದು ಇದೀಗ ಪಾಕಿಸ್ತಾನಕ್ಕೆ ಭೇಟಿ ನೀಡಿ ಅಲ್ಲಿನ ತನಿಖೆ ಮುಗಿಸಲು ಅಲ್ಲಿನ ಸರಕಾರದ ಅನುಮತಿಗಾಗಿ ಕಾಯುತ್ತಿದೆ, ಎಂದು ಅವರು ಮಾಹಿತಿ ನೀಡಿದ್ದಾರೆ.
ಅದೇ ಸಮಯ ಪಾಕಿಸ್ತಾನ ಅಲ್ಲಿ ತನಿಖೆ ನಡೆಸಲು ಅನುಮತಿಸದೇ ಇದ್ದರೂ ಸಹಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಅವರುಹೇಳಿದರಲ್ಲದೆ ಈ ದಾಳಿಯಲ್ಲಿ ಮೌಲಾನಾ ಮಸೂದ್ ಅಝರ್ ಹಾಗೂ ಆತನ ಸಹೋದರ ರಾವುಫ್ ಅಝರ್ ಕೈವಾಡವಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿದ್ದು ಅವರ ಹೆಸರುಗಳನ್ನು ಚಾರ್ಜ್ ಶೀಟಿನಲ್ಲಿನಮೂದಿಸಲಾಗುವುದು, ಎಂದಿದ್ದಾರೆ.
ಇಲ್ಲಿಯ ತನಕ ನಡೆಸಲಾದ ತನಿಖೆಯಲ್ಲಿ ಈ ದಾಳಿಗೆ ದೇಶದೊಳಗಿನಿಂದ ಯಾರಾದರೂ ಸಹಾಯ ನಡೆಸಿದ ಬಗ್ಗೆಮಾಹಿತಿಯಿಲ್ಲವೆಂದು ಅವರ ಹೇಳಿದ್ದಾರೆ. ವಾಯುನೆಲೆಯ ಸುರಕ್ಷಾ ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದವೇ ಎಂಬ ಪ್ರಶ್ನೆಗೆ ಈ ವಿಚಾರವನ್ನುಸರಕಾರ ನೋಡಿಕೊಳ್ಳಬೇಕು, ನಾವು ಕೇವಲ ದಾಳಿಯ ಬಗ್ಗೆ ತನಿಖೆ ನಡೆಸಿದ್ದೇವೆ ಎಂದು ಹೇಳಿದರು.