ಕಾರ್ಗಿಲ್ ವಿಜಯ ದಿವಸ
ಯುದ್ಧ ಸ್ಮಾರಕಕ್ಕೆ ಸೇನಾ ಮುಖ್ಯಸ್ಥರ ನಮನ
ಶ್ರೀನಗರ, ಜು.25: ಜಮ್ಮು-ಕಾಶ್ಮೀರದ ದ್ರಾಸ್ ವಿಭಾಗದಲ್ಲಿರುವ ಯುದ್ಧ ಸ್ಮಾರಕಕ್ಕೆ ಸೋಮವಾರ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಅವರು 1999ರ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ ಯೋಧರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿದರು.
ಹಿರಿಯ ಸೇನಾಧಿಕಾರಿಗಳಾದ ಲೆಜಡಿ.ಎಸ್.ಹೂಡಾ ಮತ್ತು ಲೆಜ ಎಸ್.ಕೆ.ಪಟ್ಯಾಲ್ ಅವರು ಜಸಿಂಗ್ ಜೊತೆಯಲ್ಲಿದ್ದರು. ಈ ವೇಳೆ ಜಸಿಂಗ್ ಅವರು ಹುತಾತ್ಮ ಯೋಧರ ಪತ್ನಿಯರು ಮತ್ತು ಬಂಧುಗಳೊಂದಿಗೆ ಸಂವಾದ ನಡೆಸಿದರು.
‘ಆಪರೇಷನ್ ವಿಜಯ್ ’ನಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವಿನ ನೆನಪಿಗಾಗಿ ಸೇನೆಯು ಒಂದು ವಾರ ಕಾಲ ಹಮ್ಮಿಕೊಂಡಿರುವ 17ನೆ ಕಾರ್ಗಿಲ್ ವಿಜಯ ದಿವಸ್ ಆಚರಣೆಯು ಮಂಗಳವಾರ ಸಂಪನ್ನಗೊಳ್ಳಲಿದೆ.
Next Story