ಜಿಯೋ ಪ್ರಧಾನಿ ಜಾಹೀರಾತು : ನಗೆಯುಕ್ಕಿಸಿ ಚುಚ್ಚಿದ ಲಾಲು ಪ್ರತಿಕ್ರಿಯೆ
ಲಾಲೂಗೆ ಲಾಲು ಮಾತ್ರ ಸಾಟಿ !
ಹೊಸದಿಲ್ಲಿ, ಸೆ. 3 : ಪ್ರಧಾನಿ ನರೇಂದ್ರ ಮೋದಿ ಅವರು ರಿಲಯನ್ಸ್ ಜಿಯೋ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಳಿಕ ವ್ಯಾಪಕ ಟೀಕೆ, ಅಸಮಾಧಾನ ವ್ಯಕ್ತವಾಗಿರುವ ಬೆನ್ನಲ್ಲೇ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ವಿಭಿನ್ನವಾಗಿ ಇದಕ್ಕೆ ಪ್ರತಿಕ್ರಿಯಿಸಿ ಗಮನ ಸೆಳೆದಿದ್ದಾರೆ.
" ಬಡವರು ಹೊಟ್ಟೆಗೆ ಡಾಟಾ ತಿನ್ನುತ್ತಾರೆಯೇ ಅಥವಾ ಆಟ ( ಗೋಧಿ ಹಿಟ್ಟು ). ಈಗ ಡಾಟಾ ಅಗ್ಗವಾಗಿ, ಆಟ ತುಟ್ಟಿಯಾಗಿದೆ. ಇದು ಇವರು ದೇಶವನ್ನು ಬದಲಾಯಿಸುತ್ತಿರುವ ರೀತಿ. ಇನ್ನು ತೀವ್ರವಾಗಿರುವ ಕಾಲ್ ದ್ರಾಪ್ ಸಮಸ್ಯೆಯನ್ನು ಯಾರು ಪರಿಹರಿಸುತ್ತಾರೆ " ಎಂದು ಲಾಲು ಶನಿವಾರ ಹಿಂದಿಯಲ್ಲಿ ಟ್ವೀಟ್ ಮಾಡಿರುವುದು ತೀವ್ರ ಚರ್ಚೆ ಹಾಗು ನಗುವಿಗೆ ಗ್ರಾಸವಾಗಿದೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿಯನ್ನು ತೀವ್ರವಾಗಿ ಟೀಕಿಸಿದ ಬಳಿಕ ಲಾಲು ಟೀಕೆ ಹೊರಬಿದ್ದಿದೆ.
गरीब डाटा खायेगा या आटा? डाटा सस्ता,आटा मंहगा
— Lalu Prasad Yadav (@laluprasadrjd) September 3, 2016
यही इनकी देश बदलने की परिभाषा है।लगे हाथ ये भी बता दो, काल ड्रॉप की समस्या कौन सुलझाएगा?