ಸಂಸದ ಕಾಣೆಯಾಗಿದ್ದಾರೆ: ಹೀಗೊಂದು ಪೋಸ್ಟರ್!
ಯಮುನಾನಗರ್, ಸೆಪ್ಟಂಬರ್ 24: ಆಮ್ಆದ್ಮಿ ಬ್ರಿಗೇಡ್ ಹರಿಯಾಣದ ಸದಸ್ಯರು ಅಂಬಾಲದ ಲೋಕಸಭಾ ಸದಸ್ಯ ರತನ್ಲಾಲ್ ಕಟಾರಿಯಾ ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಅಂಟಿಸಿದ್ದಾರೆ. ಶುಕ್ರವಾರ ಪಂಚಕುಲಾ ಜಿಲ್ಲಾಧಿಕಾರಿಗಳ ಕಚೇರಿಯ ಗೋಡೆಗಳಲ್ಲಿ ಪೋಸ್ಟರ್ ಕಂಡು ಬಂದಿವೆ. ಮಾತ್ರವಲ್ಲ ಬ್ರಿಗೇಡ್ ಸದಸ್ಯರು ಕಟಾರಿಯಾ ನಾಪತ್ತೆಯಾಗಿದ್ದಾರೆಂದು ಸಿಎಂ ಕಚೇರಿ ಮೂಲಕ ದೂರು ಸಲ್ಲಿಸುವುದಾಗಿಯೂ ಹೇಳಿದ್ದಾರೆಂದು ವರದಿಯಾಗಿದೆ.
ಆಮ್ಆದ್ಮಿಬ್ರಿಗೇಡ್ ಒಂದು ಸಾರ್ವಜನಿಕ ಸಂಘಟನೆಯಾಗಿದ್ದು ಅದಕ್ಕೂ ಆಮ್ ಆದ್ಮಿಪಾರ್ಟಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಬ್ರಿಗೇಡ್ನ ಸದಸ್ಯರು ಸಂಸದರು ಜನರ ಮಧ್ಯೆ ಬಾರದೆ ಕೋಣೆಗಂಟಿಕೂತಿದ್ದಾರೆಂದು ಆರೋಪಿಸಿದ್ದಾರೆ. ವರದಿಯಾಗಿರುವ ಪ್ರಕಾರ ಸಂಸದರು ಕಾಣೆಯಾಗಿದ್ದಾರೆಂದು ಕರಪತ್ರಗಳನ್ನು ಕೂಡಾ ಹಂಚಿದ್ದಾರೆ ಎನ್ನಲಾಗಿದೆ. ಈಗ ರತನ್ಲಾಲ್ಕಟಾರಿಯಾರ ಭಾವಚಿತ್ರದೊಂದಿಗಿನ ಪೋಸ್ಟರ್ ಜಿಲ್ಲಾಧಿಕಾರಿ ಕಚೇರಿಯ ಗೋಡೆಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದೆ. ಫೋಸ್ಟರ್ ಅಂಟಿಸಿದವರು ತಮ್ಮ ಹೆಸರು ಮತ್ತುಫೋನ್ ನಂಬರ್ನ್ನು ಕೂಡಾ ಪೋಸ್ಟರ್ನಲ್ಲಿ ಬರೆದಿದ್ದಾರೆ. ಸಂಸದರಾಗಿ ಆಯ್ಕೆಯಾಗಿ ಹೋದಮೇಲೆ ಕಟಾರಿಯ ತನ್ನ ಕ್ಷೇತ್ರವನ್ನು ಕಡೆಗಣಿಸಿದ್ದಾರೆಂದು ಜನರು ದೂರುತ್ತಿದ್ದಾರೆ. ಕ್ಷೇತ್ರದಲ್ಲಿ ಸಂಸದರು ಕಾಣಿಸಿಕೊಳ್ಳದ್ದರಿಂದ ಅವರು ಕಾಣೆಯಾಗಿದ್ದಾರೆಂಬ ಪೋಸ್ಟರ್ ಅಂಟಿಸಿ ತಮ್ಮ ಆಕ್ರೋಶವನ್ನು ಪ್ರಕಟಿಸಿದ್ದಾರೆಂದು ವರದಿ ತಿಳಿಸಿದೆ.