ಅರ್ನಾಬ್ ಗೆ ಕುಟುಕಿದ ನ್ಯಾ.ಕಾಟ್ಜು
ಏನು ಹೇಳಿದ್ದಾರೆ ನೋಡಿ
ಹೊಸದಿಲ್ಲಿ, ಅಕ್ಟೋಬರ್ 1: ಟೈಂಸ್ ನೌ ಚ್ಯಾನೆಲ್ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಾಧೀಶರಾದ ಮಾರ್ಕಂಡೇಯ ಕಟ್ಜು ಟೀಕಿಸಿದ್ದಾರೆ. ಟೈಮ್ಸ್ ನೌನ ಡ್ರೋನ್ ಕ್ವಿಕ್ ಶಾಟ್ ಆದ ಅರ್ನಾಬ್ರನ್ನು ಭಾರತದ ಸೇನೆಯ ಮುಖ್ಯಸ್ಥರಾಗಿ, ಅವರ ಸಹೋದ್ಯೋಗಿಗಳನ್ನು ಕಮಾಂಡರ್ ಆಗಿಯೂ ನೇಮಿಸಬೇಕೆಂದು ಅವರು ಟ್ವೀಟ್ ಮಾಡಿ ಭಾರತ ಸರಕಾರವನ್ನು ಆಗ್ರಹಿಸಿದ್ದಾರೆಂದು ವರದಿಯಾಗಿದೆ.
ಹೀಗೆ ಮಾಡಿದರೆ ಗುಂಡುಹಾರಾಟವೋ, ಯಾವೊಬ್ಬ ಸೈನಿಕನು ನಷ್ಟವಾಗದೆ ಎಲ್ಲ ಯುದ್ಧವನ್ನು ಗೆಲ್ಲಲು ಸಾಧ್ಯವಿದೆ ಎಂದು ತಾನುಖಚಿತವಾಗಿ ಹೇಳುತ್ತೇನೆ ಎಂದು ಕಟ್ಜು ವ್ಯಂಗ್ಯವಾಡಿದ್ದಾರೆ. ಚ್ಯಾನೆಲ್ ಚರ್ಚೆಯಲ್ಲಿ ಪ್ರತಿವಾದಿಗಳನ್ನು ಕಟು ಅಸಹನೆಯಿಂದ ಎದುರಿಸುವ ಕುಪ್ರಸಿದ್ಧಿ ಅರ್ನಾಬ್ ಗೋಸ್ವಾಮಿಗಿದೆ ಎಂದು ವರದಿ ತಿಳಿಸಿದೆ.
Next Story