ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್,ಓಂಪುರಿ ಪಾಕ್ ಏಜೆಂಟ್ ಗಳು: ಹಿಂದೂ ಮಹಾಸಭಾ
ಲಕ್ನೊ,ಅ.5: ಬಾಲಿವುಡ್ ಕಲಾವಿದ ಓಂಪುರಿ ಮತ್ತು ಕೇಜ್ರಿವಾಲ್ರನ್ನು ಪಾಕ್ ಏಜೆಂಟ್ ಎಂದು ಹಿಂದೂ ಮಹಾಸಭಾ ಘೋಷಿಸಿದೆ ಎಂದು ವರದಿಯಾಗಿದೆ. ಓಂಪುರಿ ಖಾಸಗಿ ಚ್ಯಾನೆಲ್ವೊಂದರಲ್ಲಿ ಚರ್ಚೆ ಮಾಡುತ್ತಾ ಭಾರತದ ಸೈನಿಕರನ್ನು ಅಪಮಾನಿಸಿದ್ದು ಅವರನ್ನು ಪಾಕಿಸ್ತಾನದ ಏಜೆಂಟ್ ಎಂದು ಅದು ಕರೆದಿದೆ.
ವರದಿಯಾಗುವ ಪ್ರಕಾರ ಹಿಂದೂ ಮಹಾಸಭಾ ದ ಪ್ರಾಂತೀಯ ವಕ್ತಾರ ಮತ್ತು ವಕೀಲ ಮನೀಷ್ ಪಾಂಡೆ ಆಕ್ರೋಶ ವ್ಯಕ್ತಪಡಿಸುತ್ತಾಓಂಪುರಿಯಂತಹ ಪರ ದ್ರೋಹಿಗಳನ್ನು ಜೈಲಿಗೆ ಹಾಕುವುದೊಂದು ಅಂತಿಮ ಉಪಾಯ ಎಂದು ಸಿಡಿಮಿಡಿಯಾಗಿದ್ದಾರೆ. ಕೇಜ್ರಿವಾಲ್ ಸರ್ಜಿಕಲ್ ಸ್ಟ್ರೈಕ್ನ ವೀಡಿಯೊಕ್ಕೆ ಬೇಡಿಕೆ ಇಟ್ಟು ಅವರ ಮನಸ್ಸು ಎಷ್ಟು ಕೊಳಕು ಎಂಬುದನ್ನು ಸಾಬೀತು ಪಡಿಸಿದ್ದಾರೆಂದು ಮನೀಷ್ ಪಾಂಡೆ ಹೇಳಿದ್ದಾರೆ.
ಓಂಪುರಿ ಯ ವಿವಾದಿತ ಹೇಳಿಕೆ
ಪಾಕಿಸ್ತಾನದ ಕಲಾವಿದರ ಕುರಿತು ಮಾತಾಡುತ್ತಾ ಓಂಪುರಿ ಅವರನ್ನು ಬೆಂಬಲಿಸಿ ವಿವಾದಾಸ್ಪದ ಹೇಳಿಕೆ ನೀಡಿದ್ದರು. ನಾವು ಯಾವುದೇ ಜವಾನರನ್ನು ಸೈನ್ಯ ಸೇರಬೇಕೆಂದು ಒತ್ತಾಯಿಸಿಲ್ಲ ಎಂದು ಓಂಪುರಿ ಚ್ಯಾನೆಲ್ ಚರ್ಚೆಯ ವೇಳೆ ಹೇಳಿದ್ದರು ಎಂದು ವರದಿತಿಳಿಸಿದೆ.