ಸೈನಿಕರೊಂದಿಗೆ ಏಕತೆ ಪ್ರದರ್ಶನಕ್ಕೆ ಯೋಗ್ಯ ಸಮುಯ: ಅಮಿತಾಭ್
ಹೊಸದಿಲ್ಲಿ, ಅ.11: ನಮ್ಮ ಸೈನಿಕರೊಂದಿಗೆ ಏಕತೆ ಪ್ರದರ್ಶಿಸಲು ಇದು ಸಮಯವಾಗಿದೆಯೆಂದು ಬಾಲಿವುಡ್ ಸೂಪರ್ಸ್ಟಾರ್ ಅಮಿತಾಭ್ ಬಚ್ಚನ್ ಇಂದಿಲ್ಲ ಹೇಳಿದ್ದಾರೆ.
ಆದಾಗ್ಯೂ, ಉರಿ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ಕೆಲಸ ಮಾಡಲು ಪಾಕಿಸ್ತಾನಿ ಕಲಾವಿದರಿಗೆ ಅವಕಾಶ ನೀಡಬೇಕೇ ಬೇಡವೇ ಎಂಬ ಪ್ರಶ್ನೆಗುತ್ತರಿಸಲು ಅವರು ನಿರಾಕರಿಸಿದ್ದಾರೆ.
ಬಚ್ಚನ್, ಇಂದು ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಉರಿ ದಾಳಿಯ ಹೊಗೆ ಹರಡಿದೆ. ನಮ್ಮ ಜವಾನರೊಂದಿಗೆ ಏಕತೆ ಪ್ರದರ್ಶಿಸಲು ಇದು ಸರಿಯಾದ ಸಮಯವಾಗಿದೆಯೆಂದು ಅವರು ಹೇಳಿದರು.
ಸೆ.18ರಂದು ಉರಿ ಭಯೋತ್ಪಾದಕ ದಾಳಿ ನಡೆದ ಬಳಿಕ ಭಾರತೀಯ ಚಲಚ್ಚಿತ್ರ ನಿರ್ಮಾಪಕರ ಸಂಘವು ಪಾಕಿಸ್ತಾನದ ಕಳಾವಿದರು ಮತ್ತು ತಂತ್ರಜ್ಞರಿಗೆ ನಿಷೇಧ ವಿಧಿಸುವಂತೆ ಕರೆ ನೀಡಿತ್ತು.
Next Story