ನಾಲ್ಕು ವರ್ಷದ ಹೆಣ್ಣು ಮಗುವನ್ನು ನದಿಗೆಸೆದು ಕೊಂದ ಮಹಿಳೆ
ಆಂಬಲ್ಲೂರ್, ಅಕ್ಟೋಬರ್ 15: ಪುದುಕ್ಕಾಡ್ ಪಾಯಾಯಿಯಲ್ಲಿ ನಾಲ್ಕುವರ್ಷ ವಯಸ್ಸಿನ ಮಗು ಹೊಳೆಗೆ ಬಿದ್ದ ಘಟನೆ ಕೊಲೆಯೆನ್ನುವುದು ದೃಢಗೊಂಡಿದೆ ಎಂದು ವರದಿಯೊಂದು ತಿಳಿಸಿದೆ. ಕಣ್ಣೂರ್ ಮಟ್ಟನ್ನೂರ್ನ ರಂಜಿತ್-ನೀಷ್ಮಾ ದಂಪತಿಯ ಏಕೈಕ ಪುತ್ರಿ ಮೇಬಾ ಎಂಬ ಮಗುವನ್ನು ಸಂಬಂಧಿಕಳಾದ ಮಹಿಳೆಯೊಬ್ಬರು ನದಿಗೆ ಎಸೆದು ಕೊಂದು ಹಾಕಿರುವುದು ಬಹಿರಂಗವಾಗಿದೆ. ವೈಯಕ್ತಿಕ ಹಗೆ ತನದಲ್ಲಿ ಸಂಬಂಧಿಕಳಾದ ಮಹಿಳೆ ಈ ಕೃತ್ಯವೆಸಗಿದ್ದು, ಆರೋಪಿಯಮಹಿಳೆಯನ್ನು ಪೊಲೀಸರು ಘಟನೆಯ ಸ್ಥಳಕ್ಕೆ ಕರೆತಂದು ಸಾಕ್ಷ್ಯ ಸಂಗ್ರಹಿಸಿದ್ದಾರೆ ಎಂದು ವರದಿ ತಿಳಿಸಿದೆ. ಗುರುವಾರ ಸಂಜೆ ಪಾಯಾಯಿಯಲ್ಲಿರುವ ನೀಷ್ಮಾ ಅವರ ಮನೆ ಸಮೀಪದ ಮಣಲಿ ಎಂಬ ನದಿಯಲ್ಲಿ ಮೇಬಾ ಮುಳುಗಿ ಮೃತಳಾಗಿದ್ದಳು. ಮನೆಯ ಸಮೀಪ ಆಡುತ್ತಿದ ಮಗು ಕಾಣೆಯಾಗಿತ್ತು. ಸಂದೇಹವಾಗಿ ಮನೆಯವರು ಹೊಳೆಗೆ ಇಳಿದು ನೋಡಿದಾಗ ಮಗು ಕಂಡು ಬಂದಿತ್ತು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಮೃತವಾಗಿತ್ತು. ರಂಜಿತ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು,ಮಗುಮೇಬಾ ವತ್ತು ನೀಷ್ಮಾ ಪಾಯಾಯಿಯಲ್ಲಿ ವಾಸಿಸುತ್ತಿದ್ದರು ಎಂದು ವರದಿ ತಿಳಿಸಿದೆ.