ನಟ ಮೋಹನಲಾಲ್ ವಿರುದ್ಧ ತ್ವರಿತ ಪ್ರಮಾಣೀಕರಣಕ್ಕೆ ಆದೇಶ
ಕೊಚ್ಚಿ,ಅ.15: ಆನೆದಂತ ವಶ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಮಲಯಾಳಂ ನಟ ಮೋಹನಲಾಲ್ ಮತ್ತು ಮಾಜಿ ಯುಡಿಎಫ್ ಸಚಿವ ಟಿ.ರಾಧಾಕೃಷ್ಣನ್ ಅವರ ವಿರುದ್ಧ ತ್ವರಿತ ಪ್ರಮಾಣೀಕರಣಕ್ಕೆ ಇಲ್ಲಿಗೆ ಸಮೀಪದ ಮುವಾಟ್ಟುಪುಝಾದ ಜಾಗ್ರತ ನ್ಯಾಯಾಲಯವು ಶನಿವಾರ ಆದೇಶಿಸಿದೆ. 2012ರ ಜೂನ್ನಲ್ಲಿ ಮೋಹನಲಾಲ್ ನಿವಾಸದ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಅಕ್ರಮವಾಗಿ ಇರಿಸಿಕೊಂಡಿದ್ದ ನಾಲ್ಕು ಆನೆದಂತಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿದ್ದರು.
ಪ್ರಕರಣದಲ್ಲಿ ಭಾಗಿಯಾಗಿರುವ ಇತರ ನಾಲ್ವರ ವಿರುದ್ಧವೂ ನ್ಯಾಯಾಲಯವು ಇಂತಹುದೇ ಆದೇಶವನ್ನು ಹೊರಡಿಸಿದೆ.
ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.16ಕ್ಕೆ ನಿಗದಿಗೊಳಿಸಿದೆ.
Next Story