ಭೋಪಾಲ್ ಎನ್ಕೌಂಟರ್; ನಗದು ಬಹುಮಾನಕ್ಕೆ ತಡೆ..!
ಭೋಪಾಲ್, ನ.5: ಭೋಪಾಲ್ನಲ್ಲಿ ಕಳೆದ ಸೋಮವಾರ ಜೈಲಿನಿಂದ ಪರಾರಿಯಾದ ಎಂಟು ಮಂದಿ ಸಿಮಿ ಕಾರ್ಯಕರ್ತರನ್ನು ಎನ್ಕೌಂಟರ್ನಲ್ಲಿ ಮುಗಿಸಿದ ಪೊಲೀಸರಿಗೆ ಘೋಷಿಸಿದ್ದ ನಗದು ಬಹುಮಾನವನ್ನು ಮಧ್ಯ ಪ್ರದೇಶ ಸರಕಾರ ತಾತ್ಕಾಲಿಕವಾಗಿ ತಡೆ ಹಿಡಿದಿದೆ.
ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಸರಕಾರ ಆದೇಶಿಸಿದ್ದು, ಈ ತನಿಖೆ ಮುಗಿಯುವ ತನಕ ನಗದು ಪುರಸ್ಕಾರ ನೀಡುವುದನ್ನು ತಡೆ ಹಿಡಿಯಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಆರಂಭದಲ್ಲಿ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ತಲಾ 2 ಲಕ್ಷ ರೂ. ನಗದು ಬಹುಮಾನ ಪ್ರಕಟಿಸಿದ್ದರು.
Next Story