ಕ್ಯಾಶ್ಲೆಸ್ ಅರ್ಥವ್ಯವಸ್ಥೆಯ ಕಲ್ಪನೆ ವ್ಯರ್ಥ: ನಿತೀಶ್ ಕುಮಾರ್
ಪಾಟ್ನ, ಡಿಸೆಂಬರ್ 6: ನೋಟು ಅಮಾನ್ಯಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅಭಿಯಾನವನ್ನು ಬೆಂಬಲಿಸಿದ್ದ ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಪ್ರಧಾನಿಯ ಕ್ಯಾಶ್ಲೆಸ್ ಸೊಸೈಟಿಯ ಕನಸನ್ನು ಅರ್ಥಹೀನವಾದುದು ಎಂದಿದ್ದಾರೆಂದು ವರದಿಯಾಗಿದೆ. ಕ್ಯಾಶ್ಲೆಸ್ ಅರ್ಥವ್ಯವಸ್ಥೆಯ ಕನಸು ಕಾಣುವುದು ನಿರರ್ಥಕವಾಗಿದೆ ಎಂದು ಪಾಟ್ನದಲ್ಲಿ ಮೋದಿಯ ಕ್ಯಾಶ್ಲೆಸ್ ಅರ್ಥವ್ಯವಸ್ಥೆಯ ಕನಸ್ಸಿನ ಕುರಿತು ನೀಡಿದ ತನ್ನ ಪ್ರಥಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ ನಗದಿ ಹಣ ನೀಡಿ ಖರೀದಿ ಮಾರಾಟ ಮಾಡುವುದು ಜನರ ಅಭ್ಯಾಸವಾಗಿದೆ. ಆದ್ದರಿಂದ ಕ್ಯಾಶ್ಲೆಸ್ ಇಕಾನಮಿ ಯಶಸ್ವಿಯಾಗುವುದೆಂದು ತಾನು ಭಾವಿಸುವುದಿಲ್ಲ ಎಂದು ನಿತೀಶ್ ಅಭಿಪ್ರಾಯ ಪಟ್ಟಿದ್ದಾರೆ.
ನಿತೀಶ್ ಜನರ ಸಮಸ್ಯೆಯನ್ನು ಆಲಿಸುವ ಜನತಾ ದರ್ಬಾರ್ನಲ್ಲಿ ಭಾಗವಹಿಸಿ ಮಾತಾಡುತ್ತಿದ್ದರು. ಐವತ್ತು ದಿವಸಗಳಲ್ಲಿ ಕಪ್ಪುಹಣದವರಿಂದ ಎಷ್ಟು ಹಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಬಹುದು. ಆದರೆ ಬ್ಯಾಂಕಿನಲ್ಲಿ ಗಂಟೆಗಟ್ಟಲೆ ಹಣಕ್ಕಾಗಿ ಕಾಯುವ ಜನರು ಈ ನಿರೀಕ್ಷೆಯಿಂದ ಕೋಪಗೊಂಡಿಲ್ಲ. ಅದೇವೇಳೆ ನೋಟು ಅಮಾನ್ಯಗೊಳಿಸುವುದರಿಂದ ಹೆಚ್ಚಿನ ಪರಿಣಾಮ ಆಗದು ಎಂದು ನಿತೀಶ್ ಮೋದಿ ಸರಕಾರಕ್ಕೆ ಸಲಹೆ ನೀಡಿದ್ದಾರೆ. ಆದ್ದರಿಂದ ಬೇನಾಮಿ ಆಸ್ತಿ ಮಾಡಿಟ್ಟುಕೊಂಡವರ ವಿರುದ್ಧ ಕಾರ್ಯಾಚರಣೆಗೆ ವಿಳಂಬಮಾಡಬಾರದು. ಜನರಿಗೆ ನೋಟು ಅಮಾನ್ಯಗೊಳಿಸಿದ್ದರಿಂದಾಗುವ ತೊಂದರೆಯನ್ನು ಕಪ್ಪುಹಣದ ವಿಷಯ ಹೇಳಿ ಸಂತೈಸುತ್ತಿದ್ದಾರೆ.
ಆದರೆ ಈ ವಿಷಯದ ವಿಭಿನ್ನ ಮಗ್ಗುಲುಗಳನ್ನು ನಿವಾರಿಸುವ ಹೊಣೆ ಕೇಂದ್ರ ಸರಕಾರದ ಮೇಲಿದೆ ಎಂದು ನಿತೀಶ್ ಹೇಳಿದ್ದಾರೆ.
ಬಿಜೆಪಿ ಬೇರೆ ಬೇರೆ ಜಿಲ್ಲೆಗಳಲ್ಲಿ ಪಾರ್ಟಿ ಕಚೇರಿಗೆ ಖರೀದಿಸಿದ ಹಗರಣದ ಕುರಿತ ತನಿಖೆಯನ್ನು ಅದಕ್ಕೆ ಸಂಬಂಧಿಸಿದ ವಿಭಾಗ ನೋಡಿಕೊಳ್ಳಲಿದೆ ಎಂದುನಿತೀಶ್ ತಿಳಿಸಿದ್ದಾರೆ. ಜಮೀನು ಖರೀದಿಸಲು ಹಣ ಹೇಗೆ ಬಂತು ಎಲ್ಲಿಂದ ಬಂತು ಎಂದು ತನಿಖೆಮಾಡಿಸುವುದು ತನ್ನ ವ್ಯಾಪ್ತಿಯಲ್ಲಿರುವ ವಿಚಾರವಲ್ಲ ಎಂದು ನಿತೀಶ್ ಹೇಳಿರುವುದಾಗಿ ವರದಿ ತಿಳಿಸಿದೆ.