ಉಗ್ರವಾದವನ್ನು ನಿರ್ನಾಮ ಮಾಡಿದರೆ ಪಾಕಿಸ್ತಾನದೊಂದಿಗೆ ನಿಲ್ಲಲು ಸಿದ್ಧ: ರಾಜ್ನಾಥ್
ಜೈಪುರ: ಉಗ್ರವಾದ ಹಾಗೂ ಉಗ್ರವಾದಿಗಳನ್ನು ನಿರ್ನಾಮ ಮಾಡಲು ತಯಾರಾದರೆ ಪಾಕಿಸ್ತಾನಿನೊಂದಿಗೆ ನಿಲ್ಲಲು ಸಿದ್ಧ ಎಂದು ಭಾರತ ಹೇಳಿದೆ.
ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ನೀವು ಸಿದ್ಧವಾದರೆ ಅದು ದಕ್ಷಿಣೇಶ್ಯಾದಲ್ಲಿ ಶಾಂತಿ ಸ್ಥಾಪನೆಗೆ ನೆರವಾಗಲಿದೆ ಎಂದು ಗೃಹಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಭಾರತದಲ್ಲಿ ನಡೆಯುವ ಉಗ್ರರದಾಳಿಗಳಲ್ಲಿ ಪಾಕಿಸ್ತಾನದ್ದು ಬಹುಪಾಲಿದೆ. ಆದ್ದರಿಂದ ಭಾರತದ ವಿರುದ್ಧ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಗಳನ್ನು ನಿರ್ನಾಮ ಮಾಡಬೇಕು. ಉಗ್ರರು ಹಾಗೂ ಸಂಘಟನೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡರೆ ಪಾಕಿಸ್ತಾನಿನೊಂದಿಗೆ ನಿಲ್ಲಲು ಸಿದ್ಧ ಎಂದು ರಾಜ್ನಾಥ್ ಹೇಳಿದರು.
ರಾಜಸ್ಥಾನ್ ಸರಕಾರ ಹಾಗೂ ಇಂಡಿಯಾ ಫೌಂಡೇಶನ್ ಜೊತೆಯಾಗಿ ಏರ್ಪಡಿಸಿದ್ದ ಉಗ್ರವಾದ ವಿರುದ್ಧದ ಸಮಾವೇಶದಲ್ಲಿ ಸಚಿವ ರಾಜ್ನಾಥ್ ಈ ವಿಷಯ ಹೇಳಿದರು.
Next Story