ಜನವರಿಯಲ್ಲಿ ಶಬರಿಮಲೆಗೆ: ತೃಪ್ತಿದೇಸಾಯಿ
ಪಯ್ಯನ್ನೂರ್,ಡಿ.25: ಜನವರಿಯಲ್ಲಿ ಶಬರಿಮಲೆಗೆ ತೆರಳಲಿದ್ದೇನೆ ಎಂದು ತೃಪ್ತಿದೇಸಾಯಿ ಹೇಳಿದ್ದಾರೆ. ಅವರು ಪಯ್ಯನ್ನೂರಿನಲ್ಲಿ ಸ್ವತಂತ್ರಲೋಕಂ 2016 ವಿಚಾರಗೋಷ್ಠಿ ಉದ್ಘಾಟಿಸಿ ಮಾತಾಡುತ್ತಿದ್ದರು.
ನಂಬಿಕೆಯನ್ನಲ್ಲ, ನಂಬಿಕೆಯ ಹೆಸರಿನಲ್ಲಿ ನಡೆಯುವ ವ್ಯಾಪಾರವನ್ನು ಪ್ರಶ್ನಿಸುತ್ತಿದ್ದೇನೆ. ಬೇರೆಲ್ಲ ಅಯ್ಯಪ್ಪಕ್ಷೇತ್ರಗಳಲ್ಲಿ ಮಹಿಳಾ ಪ್ರವೇಶಕ್ಕೆ ನಿಷೇಧವಿಲ್ಲ. ಕೇವಲ ಶಬರಿಮಲೆಯಲ್ಲಿ ಮಾತ್ರ ಈ ತಾರತಮ್ಯ ಯಾಕೆ ಎಂದು ಅವರು ಪ್ರಶ್ನಿಸಿದರು.
ಮಹಿಳೆಯರ ಹಕ್ಕಿಗಾಗಿ ಇದೆಲ್ಲಾ. ಆದ್ದರಿಂದ ಎಲ್ಲರೂ ಬೆಂಬಲಿಸಬೇಕು ಎಂದು ಅವರು ಜನರನ್ನು ವಿನಂತಿಸಿದ್ದಾರೆ.ಕೇರಳದ ಜಾತ್ಯತೀತ ಸರಕಾರದ ಮೇಲೆ ಹೆಚ್ಚು ನಿರೀಕ್ಷೆಯಿದೆ. ಕೇರಳದ ಸಾರ್ವಜನಿಕ ಕಾರ್ಯಕ್ರಮದಲ್ಲಿ ತಾನು ಮೊದಲಬಾರಿ ಭಾಗವಹಿಸುತ್ತಿರುವುದೆಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.
Next Story