ಸಾವಿರ ವರ್ಷ ಬದುಕಿದರೂ ಮೋದಿಗೆ ಗಾಂಧಿ ಹತ್ತಿರವೂ ತಲುಪಲು ಸಾಧ್ಯವಿಲ್ಲ:ವಿ ಎಸ್ ಅಚ್ಯುತಾನಂದನ್
ತಿರುವನಂತಪುರಂ,ಜ.21: ಪ್ರಧಾನಮಂತ್ರಿ ನರೇಂದ್ರಮೋದಿ ಸಾವಿರ ವರ್ಷ ಜೀವಿಸಿದರೂ ಚರಕದಲ್ಲಿ ನೂಲುತೆಗೆದರೂ ಗಾಂಧಿಯ ಸಮೀಪಕ್ಕೂ ತಲುಪಲು ಸಾಧ್ಯವಿಲ್ಲ ಎಂದು ಕೇರಳ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ವಿಎಸ್ ಅಚ್ಯುತಾನಂದನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಂತ್ರಗಾರಿಕೆ ನಡೆಸುವ ಮೂಲಕ ಅಡ್ವಾಣಿಯ ಕಾಲು ಹಿಡಿದು ಕೆಳಗೆದೂಡಿಹಾಕಿದವರು ಮೋದಿ. ಮೋದಿಯ ತಂತ್ರಗಾರಿಕೆಗಳನ್ನು ಜನರು ಅರ್ಥಮಾಡಿಕೊಳ್ಳಲು ಆರಂಭಿಸಿದ್ದಾರೆ ಎಂದು ಅಚ್ಯುತಾನಂದನ್ ಹೇಳಿದ್ದಾರೆಂದು ವರದಿಯಾಗಿದೆ.
Next Story