ಬೀದಿ ನಾಯಿಗೆ ಹೆದರಿ ಓಡಿದ ಗೃಹಿಣಿ ಬಾವಿಗೆ ಬಿದ್ದು ಮೃತ್ಯು
ಮಂಜೇಶ್ವರ,ಫೆ.11: ಬೀದಿನಾಯಿ ದಾಳಿಗೆ ಹೆದರಿ ಓಡಿಹೋಗಿ ಪಾರಾಗಲು ಯತ್ನಿಸಿದ ಗೃಹಿಣಿ ಬಾವಿಗೆಬಿದ್ದು ಮೃತಪಟ್ಟಿದ್ದಾರೆ. ಬಾಯಾರ್ ಚೇರಾಲಿಯ ರಘುರಾಂ ಪಾಟಾಳಿಯ ಪತ್ನಿರಾಧಾ(55) ಮೃತಪಟ್ಟ ಮಹಿಳೆಯಾಗಿದ್ದಾರೆ.
ಗುರುವಾರ ಸಂಜೆ ಐದು ಗಂಟೆಗೆ ಚಿಪ್ಪಾರಿನ ಸಮೀಪದ ಅಪ್ಪೇರಿಯಲ್ಲಿ ಘಟನೆ ನಡೆದಿದೆ. ದೇವಸ್ಥಾನದ ಉತ್ಸವದಲ್ಲಿ ಭಾಗವಹಿಸಲು ಚಿಪ್ಪಾರಿನಲ್ಲಿ ಬಸ್ ಇಳಿದು ಸಹೋದರಿ ವಾರಿಜಾರ ಮನೆಗೆ ನಡೆದು ಹೋಗುತ್ತಿದ್ದಾಗ ಬೀದಿನಾಯಿ ಅವರನ್ನು ಬೆನ್ನಟ್ಟಿತ್ತು. ನಾಯಿಗೆ ಹೆದರಿ ಓಡಿದಾಗ ಅವರು ಬಾವಿಗೆ ಬಿದ್ದಿದ್ದರು.
ಉಪ್ಪಳದಿಂದ ಅಗ್ನಿಶಾಮಕದಳ ಬಂದು ಬಾವಿಯಿಂದ ಮೇಲೆತ್ತಿ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆತಲುಪಿಸಿದರೂ ಶುಕ್ರವಾರ ಬೆಳಗ್ಗೆ ಅವರು ಮೃತಪಟ್ಟಿದ್ದಾರೆಂದು ವರದಿ ತಿಳಿಸಿದೆ.
Next Story