ರಸ್ತೆ ಅಪಘಾತದಲ್ಲಿ ಎಂಟು ಬಲಿ
ಅಂಬಾಲಾ(ಪಂಜಾಬ್),ಮಾ.1: ಇಲ್ಲಿಯ ನಾರಾಯಣಗಢ ಸಮೀಪದ ದಹಾರ್ ಅಂಬ್ಲಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಎಸ್ಯುವಿ ವಾಹನವೊಂದು ಎದುರಿನಿಂದ ಬರುತ್ತಿದ್ದ ಲಾರಿಗೆ ಅಪ್ಪಳಿಸಿದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಎಂಟು ಜನರು ಮೃತಪಟ್ಟಿದ್ದು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರು ಮತ್ತು ಗಾಯಾಳುಗಳು ಮದುವೆಯೊಂದರಲ್ಲಿ ಪಾಲ್ಗೊಳ್ಳಲು ನಾರಾಯಣಗಢ ಸಮೀಪದ ಮೋರಿ ಗ್ರಾಮದಿಂದ ಮಿರ್ಜಾಪುರ ಮಹಲಾ ಎಂಬಲ್ಲಿಗೆ ಪ್ರಯಾಣಿಸು ತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Next Story