ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಕಾಳಗ; ಕರ್ನಾಟಕದ ಯೋಧ ಮೋರೆ ಬಲಿ
ಬೆಂಗಳೂರು, ಫೆ.14: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಶನಿವಾರ ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟ ಇಬ್ಬರು ಯೋಧರಲ್ಲಿ ಕರ್ನಾಟಕದ ಯೋಧರೊಬ್ಬರು ಸೇರಿದ್ದಾರೆ.
ವಿಜಯಪುರದ ಇಂಡಿ ತಾಲ್ಲೂಕಿನ ಸಾವಳಸಂಗ ಗ್ರಾಮದ ಸಹದೇವ ಮಾರುತಿ ಮೋರೆ(26) ಉಗ್ರರ ಗುಂಡಿಗೆ ಬಲಿಯಾದ ಕರ್ನಾಟಕದ ವೀರ ಯೋಧ. ಇನ್ನೊಬ್ಬರು ಮಹಾರಾಷ್ಟ್ರದ ನಾಸಿಕ್ ನ ನಾಯ್ಕ ಶಿಂದೆ ಶಂಕರ್ ಚಂದ್ರಾಭರಣ.
ಯೋಧ ಮಾರುತಿ ಮೋರೆ ಅವರ ಪಾರ್ಥೀವ ಶರೀರ ಸಂಜೆ ಬೆಳಗಾವಿ ತಲುಪಲಿದೆ. ಯೋಧರು ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಐವರು ಉಗ್ರರು ಮತ್ತು ಇಬ್ಬರು ಯೋಧರು ಮೃತಪಟ್ಟಿದ್ದರು.
Next Story