ಸಿಯಾಚಿನ್ ದುರಂತ ಯೋಧರ ಮೃತದೇಹಗಳು ನಾಳೆ ದಿಲ್ಲಿ ತಲುಪುವ ಸಾಧ್ಯತೆ
ಹೊಸದಿಲ್ಲಿ,ಫೆ.14: ಸಿಯಾಚಿನ್ ದುರಂತಕ್ಕೆ ಬಲಿಯಾದ ಕರ್ನಾಟಕದ ನಾಗೇಶ ಮತ್ತು ಮಹೇಶ ಸೇರಿದಂತೆ ಒಂಭತ್ತು ಯೋಧರ ಮೃತದೇಹಗಳು ಅನುಕೂಲಕರ ಹವಾಮಾನವಿದ್ದರೆ ಸೋಮವಾರ ದಿಲ್ಲಿಯನ್ನು ತಲುಪುವ ಸಾಧ್ಯತೆಗಳಿವೆ.
ಖರ್ಡುಂಗ್ ಲಾದಲ್ಲಿ ತೀವ್ರ ಪ್ರತಿಕೂಲ ಹವಾಮಾನವಿದ್ದು, ಯೋಧರ ಮೃತದೇಹಗಳನ್ನು ಲೇಹ್ಗೆ ತರಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹಿರಿಯ ಸೇನಾಧಿಕಾರಿಯೋರ್ವರು ತಿಳಿಸಿದರು. ಈ ಎಲ್ಲ ಮೃತದೇಹಗಳನ್ನು ಶನಿವಾರ ಸಿಯಾಚಿನ್ ಗ್ಲೇಸಿಯರ್ನಿಂದ ಸಿಯಾಚಿನ್ ಮೂಲ ಶಿಬಿರಕ್ಕೆ ತರಲಾಗಿತ್ತು.
Next Story