ಇದು ಠಾಕ್ರೆ ಏಡಿ
ಹೊಸ ಏಡಿಯ ತಳಿಯನ್ನು ಅನ್ವೇಷಣೆ ಮಾಡಿದ ಠಾಕ್ರೆಯ ಕಿರಿಯ ಮಗ ,ತೇಜಸ್
ಮುಂಬೈ ಉದ್ಧವ ಠಾಕ್ರೆಅವರ ಮಗ ತೇಜಸ್ ,ದ್ವಿತೀಯ ವರ್ಷದ ಕಲಾವಿಭಾಗ ವಿದ್ಯಾರ್ಥಿ ಇತರ ವಿದ್ಯಾರ್ಥಿಗಳ ತಂಡದೊಂದಿಗೆ ಹಾವುಗಳ ಅನ್ವೇಷಣೆಗಾಗಿ ಕೊಂಕಣ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದರು ಆದರೆ ರಘುವೀರ ಘಾಟ್ನಲ್ಲಿ ವರ್ಣಮಯ ,ಬಹು ಕಾಲುಗಳುಳ್ಳ ಪ್ರಾಣಿ ಪ್ರಭೇದ ಒಂದು ಪತ್ತೆ ಯಾಯಿತು .
ತೇಜಸ್ ಈ ಪ್ರಭೇದವನ್ನು ಅನ್ವೇಷಣೆ ಮಾಡಿದ್ದರಿಂದ ತಾನಾಗಿಯೇ ಅದಕ್ಕೆ ಹೆಸರು ಇಡುವ ಅಧಿಕಾರ ಹೊಂದಿದ್ದನು , ಪ್ರಾರಂಭದಲ್ಲಿ ಅವರು ಪ್ರಕಾಶಮಾನವಾದ ಕೆಂಪು ಬಣ್ಣವನ್ನು ಗುರುತಿಸಿ ಏಡಿಗೆ 'ಗುಬರ್ನಾಟೋರಿಯಾನ ರುಬ್ರ' ಎಂದು ಹೆಸರು ಸೂಚಿಸಿದರು ,ಆದರೆ ಭಾರತೀಯ ಪ್ರಾಣಿ ಸರ್ವೇಕ್ಷಣಾ ಇಲಾಖೆಯ ಎಸ್ ಕೆ ಪತಿ ತೇಜಸ್ಸಿನ ಅನ್ವೇಷಣೆಯನ್ನೇ ಪರಿಶೀಲಿಸಿ ಏಡಿಯ ಹೆಸರನ್ನು ಗುಬರ್ನಾಟೋರಿಯನ ಠಾಕ್ರೆ,(ತನ್ನ ಅಡ್ಡ ಹೆಸರು) ಎಂದು ಬದಲಾಯಿಸಿದರು . ಅನ್ವೇಷಣೆ ಮಾಡಿದವರ ಹೆಸರನ್ನು ಸೇರಿಸಿ ಏಡಿ ತಳಿಗೆ ಹೆಸರು ಪೂರ್ಣಗೊಳಿಸಿದರೆಂದು ತೇಜಸ್ ತಿಳಿಸಿದರು . ತೇಜಸ್ರವರು ,ಇತರ ನಾಲ್ಕು ತಳಿಗಳನ್ನು ಅನ್ವೇಷಣೆ ಗೈದಿರುತ್ತಾರೆ ಇವರಿಗೆ ಈಗ 19 ವರ್ಷಪ್ರಾಯ