ಪ್ರವಾಹ ಪೀಡಿತ ವಯನಾಡ್ ಸಮೀಕ್ಷೆ ಮಾಡುವಾಗ ಸಮೋಸ ಸವಿಯುತ್ತಿದ್ದರೆ ರಾಹುಲ್ ಗಾಂಧಿ ?
ಮತ್ತೆ ಬಯಲಾದ ಮಧುಕೀಶ್ವರ್ ಬಂಡವಾಳ
ಪ್ರವಾಹ ಪೀಡಿತ ವಯನಾಡ್ ನ ವೈಮಾನಿಕ ಸಮೀಕ್ಷೆ ನಡೆಸುವಾಗ ಹೆಲಿಕಾಪ್ಟರ್ ನಲ್ಲಿ ಕೂತು ಸಮೋಸ ಸವಿಯುತ್ತಿದ್ದರೆ ಕಾಂಗ್ರೆಸ್ ನಾಯಕ ಹಾಗು ವಯನಾಡ್ ಸಂಸದ ರಾಹುಲ್ ಗಾಂಧಿ ?
ಫೇಸ್ ಬುಕ್ ಸಹಿತ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಒಕ್ಕಣೆ ಇದ್ದ ವಿಡಿಯೋ ಒಂದು ವೈರಲ್ ಆಗಿದೆ. ಮೊದಲು ಇದನ್ನು ಪೋಸ್ಟ್ ಮಾಡಿದ್ದು ಬಿಜೆಪಿ ಹಾಗು ಮೋದಿಯ ಕಟ್ಟಾ ಬೆಂಬಲಿಗ ಲೇಖಕಿ ಹಾಗು ಪ್ರಚೋದನಕಾರಿ, ಸುಳ್ಳು ಸುದ್ದಿಗಳನ್ನು ಹರಡುವುದಕ್ಕೆ ಇತ್ತೀಚಿಗೆ ಕುಖ್ಯಾತರಾಗಿರುವ ಮಧುಕೀಶ್ವರ್ ಪೂರ್ಣಿಮಾ ಅವರು. " ಕೇರಳದ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ಸಂದರ್ಭ ರಾಹುಲ್ ಗಾಂಧಿ ಮಜಾ ಮಾಡುತ್ತಿದ್ದಾರೆ" ಎಂದು ವಿಡಿಯೋಗೆ ಅವರು ಟಿಪ್ಪಣಿ ಬರೆದಿದ್ದರು. ಬಳಿಕ ಹಲವು ಬಿಜೆಪಿ, ಸಂಘಪರಿವಾರದ ಬೆಂಬಲಿಗರು ಇದನ್ನೇ ಪೋಸ್ಟ್ ಮಾಡಿದ್ದಾರೆ.
ಆದರೆ ಈ ಬಗ್ಗೆ ವಿವರ ಕಲೆ ಹಾಕಿರುವ altnews ವೆಬ್ ತಾಣ ಇದು ಸುಳ್ಳು ಸುದ್ದಿ ಎಂದು ಖಚಿತಪಡಿಸಿದೆ. ಈ ವಿಡಿಯೋ ಎಪ್ರಿಲ್ ತಿಂಗಳಲ್ಲಿ ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಸಂದರ್ಭದ್ದು ಹಾಗು ಅದೇ ಸಂದರ್ಭದಲ್ಲಿ ಪೋಸ್ಟ್ ಮಾಡಲಾಗಿದ್ದು ಎಂದು ಅದು ಕಂಡು ಹಿಡಿದಿದೆ. ಆಗ ಹಿಂದಿ ಟಿವಿ ಚಾನಲ್ ಗಳೂ ಈ ವಿಡಿಯೋ ವನ್ನು ಪೋಸ್ಟ್ ಮಾಡಿದ್ದರು.
ರಾಹುಲ್ ಗಾಂಧಿ ಈ ವಾರದ ಆರಂಭದಲ್ಲಿ ವಯನಾಡ್ ಗೆ ಭೇಟಿ ನೀಡಿದ್ದರು.
ಕೃಪೆ : altnews.in
Look at Wayanad MP on aerial survey of flood affected areas ,
— பாலு சோழன் BJP (@Balasub20820601) August 16, 2019
ராகூல் வயநாட்டில் வெள்ளம் பாதித்த பகுதிகளை பார்வையிடும் காட்சி
இதற்க்கு தானே ஓட்டு போட்டிங்க pic.twitter.com/fD5YkPAqf1
I left Wayanad with nothing but pride for the people I represent.
— Rahul Gandhi (@RahulGandhi) August 13, 2019
The display of bravery and dignity in the face of immense tragedy is truly humbling.
It is such an honour and pleasure to be your MP.
Thank you Kerala. pic.twitter.com/PVwmUAFboZ