ಖುಷಿಯಾಗಿರಲು ಸಲಹೆ ನೀಡಲಿದ್ದಾರೆ ರವೀಶ್ ಕುಮಾರ್ !
ಖ್ಯಾತ ಪತ್ರಕರ್ತನಿಂದ ಹೊಸ ಯೋಜನೆ
ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಹೊಸ ಸ್ಟಾರ್ಟ್ ಅಪ್ ಒಂದನ್ನು ಪ್ರಾರಂಭಿಸಿದ್ದಾರೆ. ಎನ್ ಡಿ ಟಿ ವಿ ಮೂಲಕ ದೇಶಾದ್ಯಂತ ಚಿರಪರಿಚಿತರಾಗಿರುವ, ಬಿಜೆಪಿ ಹಾಗು ಸಂಘ ಪರಿವಾರದ ಕೆಂಗಣ್ಣಿಗೆ ಹಾಗು ಜಾತ್ಯತೀತರ ಪ್ರೀತಿಗೆ ಪಾತ್ರರಾಗಿರುವ ರವೀಶ್ ಈ ಹೊಸ " ಉಚಿತ " ಸ್ಟಾರ್ಟ್ ಅಪ್ ಮೂಲಕ ಜನರಿಗೆ ಸರಣಿ ಸಲಹೆಗಳನ್ನು ನೀಡಲಿದ್ದಾರೆ ಎಂದು ಎಂದು ಈ ಸ್ಟಾರ್ಟ್ ಅಪ್ ನ ಟ್ರೇಲರ್ ನಲ್ಲಿ ರವೀಶ್ ಹೇಳಿದ್ದಾರೆ. ಜನರಿಗೆ ಖುಷಿಯಾಗಿರಲು, ಸಕಾರಾತ್ಮಕವಾಗಿ ಯೋಚಿಸಲು ಬೇಕಾದ ಸಲಹೆ ಈಗ ಸಿಗುತ್ತಿಲ್ಲ, ಅದನ್ನು ನಾನು ನೀಡಲಿದ್ದೇನೆ ಎಂದು ಅದರಲ್ಲಿ ರವೀಶ್ ಹೇಳಿದ್ದಾರೆ.
ಆಪ್ತವಾಗಿ ಮಾತನಾಡುವ, ನಿರೂಪಣೆ ಮಾಡುವ ರವೀಶ್ ರ ಈ ಹೊಸ ಯೋಜನೆ ಜನರಲ್ಲಿ ತೀವ್ರ ಆಸಕ್ತಿ ಕೆರಳಿಸುವುದು ಖಚಿತ.
ಅದರ ಟ್ರೇಲರ್ ಇಲ್ಲಿದೆ ನೋಡಿ :
Next Story