ಸ್ಥಳೀಯರಿಗೆ ಅವಕಾಶ ವಂಚನೆಯ ವಿರುದ್ಧ ತೆಲುಗು ನಟಿಯ ಅರೆನಗ್ನ ಪ್ರತಿಭಟನೆ !
ಹೈದರಾಬಾದ್,ಎ.7: ಉದ್ಯಮದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶಗಳನ್ನು ನೀಡಲಾಗುತ್ತಿಲ್ಲ ಎಂದು ಆರೋಪಿಸಿ ತೆಲುಗು ನಟಿ ಶ್ರೀ ರೆಡ್ಡಿ ಅವರು ಶನಿವಾರ ಇಲ್ಲಿಯ ಬಂಜಾರಾ ಹಿಲ್ಸ್ನಲ್ಲಿರುವ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯ ಎದುರು ಸಾರ್ವಜನಿಕವಾಗಿ ಅರೆಬೆತ್ತಲೆ ಪ್ರತಿಭಟನೆಯನ್ನು ನಡೆಸಿ ಸುದ್ದಿಗೆ ಗ್ರಾಸವಾಗಿದ್ದಾರೆ.
ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ವರ್ತನೆಯ ಆರೋಪದಲ್ಲಿ ರೆಡ್ಡಿ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತೆಲುಗು ನಿರ್ಮಾಪಕರು ಮತ್ತು ನಿರ್ದೇಶಕರು ಸ್ಥಳೀಯ ಕಲಾವಿದರಿಗೆ ಅವಕಾಶ ಗಳನ್ನು ನೀಡುವ ಬದಲಿಗೆ ಹೊರರಾಜ್ಯಗಳ ಕಲಾವಿದರಿಗೆ ಹೆಚ್ಚಿನ ಮಣೆಯನ್ನು ಹಾಕುತ್ತಿದ್ದಾರೆ ಎಂದು ಆರೋಪಿಸಿರುವ ರೆಡ್ಡಿ, ತನಗೆ ಚಲನಚಿತ್ರ ಕಲಾವಿದರ ಸಂಘದ ಸದಸ್ಯತ್ವವನ್ನೂ ನೀಡಿಲ್ಲ ಎಂದು ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಯೋರ್ವರು ತಿಳಿಸಿದರು.
Next Story