ಹಾರ್ದಿಕ್ ಪಟೇಲ್ ಮೇಲೆ ಶಾಯಿ ಎರಚಿದ ವ್ಯಕ್ತಿ
ಮಧ್ಯಪ್ರದೇಶ, ಎ.8: ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ಮೇಲೆ ಶಾಯಿ ಎರಚಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಿಲಿಂದ್ ಗುರ್ಜರ್ ಎಂದು ಗುರುತಿಸಲಾಗಿದ್ದು, ಈತನನ್ನು ತಕ್ಷಣ ಸ್ಥಳದಲ್ಲಿದ್ದವರು ಪೊಲೀಸರಿಗೊಪ್ಪಿಸಿದ್ದಾರೆ ಎನ್ನಲಾಗಿದೆ. ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಹಾರ್ದಿಕ್ ಇಲ್ಲಿದೆ ಆಗಮಿಸಿದ್ದರು ಎನ್ನಲಾಗಿದೆ.
ತನ್ನ ಸ್ವಂತ ಲಾಭಕ್ಕಾಗಿ ಹಾರ್ದಿಕ್ ಗುಜ್ಜರ್ ಹಾಗು ಪಾಟೀದಾರ್ ಸಮುದಾಯವನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಆದ್ದರಿಂದ ತಾನು ಈ ಕೃತ್ಯ ಎಸಗಿದ್ದಾಗಿ ಬಂದಿತ ವ್ಯಕ್ತಿ ಹೇಳಿದ್ದಾರೆ.
Next Story