ಹೊನ್ನಾಳಿ: ವಿದ್ಯುತ್ ತಂತಿ ತಗುಲಿ ರೈತ ಮೃತ್ಯು
ಹೊನ್ನಾಳಿ,ಜೂ.21: ಕೃಷಿ ಪಂಪ್ ಸೆಟ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲೂಕಿನ ಚೀಲೂರು ಗ್ರಾಮದ ಜಮೀನಿನಲ್ಲಿ ಬುಧವಾರ ಸಂಭವಿಸಿದೆ.
ಚೀಲೂರಿನ ಕುರುವತ್ತಿ ಗಂಗಾಧರ್(45) ಮೃತ ವ್ಯಕ್ತಿ. ಚೀಲೂರಿನ ರೈತ ವಿರೂಪಾಕ್ಷಪ್ಪ ಅವರ ಜಮೀನಿನಲ್ಲಿನ ಕೃಷಿ ಪಂಪ್ ಸೆಟ್ ದುರಸ್ತಿಗೆ ಬಂದಿದ್ದ ಕಾರಣ ಕುರುವತ್ತಿ ಗಂಗಾಧರ್ ರಿಪೇರಿ ಮಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ದುರ್ಘಟನೆ ಸಂಭವಿಸಿದೆ. ಈ ಕುರಿತು ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story