ಜೋಕಟ್ಟೆ: ಅಂಜುಮಾನ್ ವಿದ್ಯಾಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಉದ್ಘಾಟನೆ
ಮಂಗಳೂರು,ಜೂ.26: ಜೋಕಟ್ಟೆಯ ಅಂಜುಮಾನ್ ವಿದ್ಯಾಸಂಸ್ಥೆಯ 2018-19ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಉದ್ಘಾಟನೆಯು ಗಿಡ ನೆಡುವ ಮೂಲಕ ಮಂಗಳವಾರ ಶಾಲಾ ವಠಾರದಲ್ಲಿ ಜರುಗಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಮುಹಮ್ಮದ್ ರಶೀದ್, ಉಪಾಧ್ಯಕ್ಷೆಯಾಗಿ ಅಮಿತಾ, ಕಾರ್ಯದರ್ಶಿಯಾಗಿ ಸಂಸ್ಥೆಯ ಪ್ರಾಂಶುಪಾಲೆ ಡಾ.ಶಾಂತಿ ವಿಜಯ್ ಮತ್ತು ಜೊತೆ ಕಾರ್ಯದರ್ಶಿಯಾಗಿ ಶಾಲಾ ಮುಖ್ಯ ಶಿಕ್ಷಕಿ ಶುಭಾ ರವೀಂದ್ರ ಆಯ್ಕೆಗೊಂಡರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಸಿರಾಜ್, ಸಂಚಾಲಕ ಹಾಜಿ ಬಿ.ಎ.ರಶೀದ್, ಉಪಸಂಚಾಲಕ ಹಾಜಿ ಟಿ. ಅಬೂಬಕ್ಕರ್, ಸಲಹೆಗಾರ ಮೂಸಬ್ಬ ಪಿ.ಬ್ಯಾರಿ, ಶಾಲಾ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
ಲೀಶಾ ಸ್ವಾಗತಿಸಿದರು. ಮುಶೀಬಾ ವಂದಿಸಿದರು.ಶಿಕ್ಷಕಿ ಯಮುನಾ ಕಾರ್ಯಕ್ರಮ ನಿರೂಪಿಸಿದರು.
Next Story