ಕೇರಳ ಉದ್ಯೋಗಿಗಳು ಮನೆಗೆ ಹೋಗಲು ವೇತನಸಹಿತ ರಜೆ: ದುಬೈ ಕಂಪೆನಿ ಘೋಷಣೆ
ದುಬೈ, ಆ. 27: ಶತಮಾನದ ಮಳೆಯಿಂದ ಜರ್ಝರಿತಗೊಂಡಿರುವ ಕೇರಳ ಚೇತರಿಸುತ್ತಿರುವಂತೆಯೇ, ದುಬೈಯ ಕಂಪೆನಿಯೊಂದು ತನ್ನಲ್ಲಿ ಕೆಲಸ ಮಾಡುತ್ತಿರುವ ಕೇರಳ ನಿವಾಸಿಗಳ ನೆರವಿಗೆ ಧಾವಿಸಿದೆ.
ಕೇರಳದಲ್ಲಿ ಕುಟುಂಬಗಳನ್ನು ಹೊಂದಿರುವ ತನ್ನ ಉದ್ಯೋಗಿಗಳು ಮನೆಗೆ ಹೋಗಲು ಸಾಧ್ಯವಾಗುವಂತೆ ಅವರಿಗೆ ಪೂರ್ಣ ವೇತನ ಸಹಿತ ರಜೆಯನ್ನು ಒದಗಿಸುವುದಾಗಿ ದಾರ್ ಅಲ್ ಟಕಫುಲ್ ವಿಮಾ ಕಂಪೆನಿ ಘೋಷಿಸಿದೆ.
ಇದರ ಜೊತೆಗೆ, ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವುದಾಗಿಯೂ ಅದು ಹೇಳಿದೆ.
Next Story