ಮಂಗಗಳ ಕಾಟದಿಂದ ಪಾರಾಗಲು ಹನುಮಾನ್ ಚಾಲೀಸ್ ಪಠಿಸಿ ಎಂದ ಆದಿತ್ಯನಾಥ್ !
ಮಥುರಾ, ಸೆ.1: ಪ್ರಸಿದ್ಧ ಯಾತ್ರಾಸ್ಥಳವಾದ ಮಥುರಾದಲ್ಲಿ ಮಂಗಗಳ ಉಪಟಳಕ್ಕೆ ಸಂಬಂಧಿಸಿ ಮಾತನಾಡಿರುವ ಆದಿತ್ಯನಾಥ್ ಹನುಮಾನ್ ಚಾಲೀಸ್ ಪಠಿಸಿದರೆ ಮಂಗಗಳ ಉಪಟಳ ನಿಲ್ಲುತ್ತದೆ ಎಂದಿದ್ದಾರೆ ಎನ್ನಲಾಗಿದೆ.
"ನಾನು ಇಲ್ಲಿಗೆ ಬಂದಾಗ, ಕಪಿಚೇಷ್ಠೆ ಇಲ್ಲಿನ ನಿವಾಸಿಗಳಿಗೆ ದೊಡ್ಡ ಆತಂಕ ಎಂದು ಕೇಳಲ್ಪಟ್ಟೆ. ಬಜರಂಗ ಬಲಿ ಆರತಿ ನಡೆಸಿ ಮತ್ತು ಹನುಮಾನ್ ಚಾಲೀಸ್ ಪಠಿಸಿ. ಆ ಬಳಿಕ ಕೋತಿಗಳು ನಿಮಗೆ ಹಾನಿ ಮಾಡಲಾರವು ಎಂದು ಹೇಳಿದೆ" ಎಂದು ಆದಿತ್ಯನಾಥ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಎಎನ್ ಐ ವರದಿ ಮಾಡಿದೆ.
ಬಿಡಾಡಿ ದನಗಳು, ಬೀದಿನಾಯಿಗಳು, ಕೋತಿಗಳು ಮತ್ತು ಹಕ್ಕಿಗಳ ಸಂರಕ್ಷಣೆಗೆ ಪ್ರತಿ ನಗರ ನಿಗಮದಲ್ಲೂ ವ್ಯವಸ್ಥೆ ಕಲ್ಪಿಸುವುದಾಗಿ ಆದಿತ್ಯನಾಥ್ ಈ ಸಂದರ್ಭದಲ್ಲಿ ಪ್ರಕಟಿಸಿದರು. ಲಕ್ನೋದಲ್ಲಿ ಈಗಾಗಲೇ ಈ ವ್ಯವಸ್ಥೆ ಕಲ್ಪಿಸಲಾಗಿದ್ದು, ಇತರ ನಗರ ನಿಗಮಗಳಲ್ಲೂ ಈ ಯೋಜನೆ ಕ್ರಮೇಣ ಜಾರಿಗೆ ಬರಲಿದೆ ಎಂದು ಅವರು ವಿವರಿಸಿದರು.
Next Story