ಬೆಂಗಳೂರು: ಸಹಾಯದ ನೆಪದಲ್ಲಿ ಮಹಿಳೆಗೆ ವಂಚನೆ
ಬೆಂಗಳೂರು, ಸೆ.5: ಎಟಿಎಂ ಕೇಂದ್ರದಿಂದ ಹಣ ತೆಗೆಯುವಂತೆ ಸಹಾಯ ಕೇಳಿದ ಮಹಿಳೆಯೊಬ್ಬರ ಕಾರ್ಡ್ ಮತ್ತು ಪಿನ್ ಸಂಖ್ಯೆ ಪಡೆದು 20 ಸಾವಿರ ರೂ. ತೆಗೆದು ವಂಚಿಸಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೀಣ್ಯದ ಸರೋಜಮ್ಮ ಎಂಬವರು ಮಂಗಳವಾರ ಪೀಣ್ಯದ ಎಟಿಎಂ ಕೇಂದ್ರವೊಂದಕ್ಕೆ ಹಣ ತೆಗೆಯಲು ಹೋಗಿದ್ದರು. ಆದರೆ, ಅಪರಿಚಿತ ವ್ಯಕ್ತಿಯೊಬ್ಬರಿಗೆ ಹಣ ತೆಗೆಯುವಂತೆ ಮನವಿ ಮಾಡಿದ್ದಾರೆ.
ಸರೋಜಮ್ಮ ಅವರಿಂದ ಎಟಿಎಂ ಕಾರ್ಡ್ ಹಾಗೂ ಪಿನ್ ಸಂಖ್ಯೆಯನ್ನು ಪಡೆದುಕೊಂಡ ಅಪರಿಚಿತ ವ್ಯಕ್ತಿ, 20 ಸಾವಿರ ರೂ.ಪಡೆದುಕೊಂಡು ಪರಾರಿಯಾಗಿದ್ದಾನೆ. ಮಹಿಳೆ ಬೇರೆ ಎಟಿಎಂಗೆ ಹೋಗಿ ಮತ್ತೊಬ್ಬ ವ್ಯಕ್ತಿಯ ಸಹಾಯ ಪಡೆದು ಹಣ ತೆಗೆಯಲು ಮುಂದಾದಾಗ 10 ನಿಮಿಷದ ಮೊದಲು 20 ಸಾವಿರ ರೂ.ತೆಗೆದಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸರೋಜಮ್ಮ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೀಣ್ಯ ಪೊಲೀಸರು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
Next Story