ಮಂಗಳೂರಿನಲ್ಲಿ ಹಜ್ ಭವನಕ್ಕೆ ಜಮೀನಿನ ಅವಶ್ಯಕತೆ: ಆಸಕ್ತರು ಸಂಪರ್ಕಿಸಲು ಸೂಚನೆ
ಬೆಂಗಳೂರು,ಸೆ.6: ಕರ್ನಾಟಕ ಸರಕಾರವು ಹಜ್ ಯಾತ್ರಿಗಳ ಸೌಕರ್ಯಕ್ಕಾಗಿ ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡಿದೆ. ಕಟ್ಟಡವನ್ನು ಕಟ್ಟಲು ಸೂಕ್ತ ಜಮೀನಿನ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಕನಿಷ್ಠ ಅರ್ಧ ಎಕರೆ ಜಮೀನನ್ನು ಸಾರ್ವಜನಿಕರು ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಕೊಡುವವರಿದ್ದರೆ ಹಜ್ ಸಮಿತಿಯ EO/ Nodal Officer (ಮೊ.ನಂ 9845008556) ಇವರನ್ನು ಸಂಪರ್ಕಿಸಬಹುದು. ಭವನಕ್ಕೆ ದಾನಿಗಳ ಅಥವಾ ಇವರಿಂದ ಪ್ರಸ್ತಾಪಿಸಲ್ಪಡುವವರ ಹೆಸರನ್ನು ಇಡಲು ಅವಕಾಶ ಇದೆ ಎಂದು ಕರ್ನಾಟಕ ರಾಜ್ಯ ಹಜ್ ಕಮಿಟಿಯ ಕಾರ್ಯ ನಿರ್ವಹಣಾಧಿಕಾರಿ ಸರ್ಫರಾಜ್ ಖಾನ್. ಎಸ್ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story