ರಾಹುಲ್ ಗಾಂಧಿ ದೇಶದ ‘ಅತೀ ದೊಡ್ಡ ವಿದೂಷಕ’ ಎಂದ ಚಂದ್ರಶೇಖರ್ ರಾವ್
ಹೊಸದಿಲ್ಲಿ, ಸೆ.6: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಹಾಗು ಟಿಆರ್ ಎಸ್ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ವಾಗ್ದಾಳಿ ನಡೆಸಿದ್ದು, ರಾಹುಲ್ ದೇಶದ ‘ಅತೀ ದೊಡ್ಡ ವಿದೂಷಕ’ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ ನಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನು ಹೇಗೆ ತಬ್ಬಿದರು ಮತ್ತು ಕಣ್ಣು ಮಿಟುಕಿಸಿದರು ಎಂದು ಇಡೀ ದೇಶವೇ ನೋಡಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ತೆಲಂಗಾಣದ ‘ಅತೀ ದೊಡ್ಡ ಶತ್ರು’ ಎಂದ ಅವರು, ಟಿಆರ್ ಎಸ್ ಸರಕಾರದ ವಿರುದ್ಧ ಕಾಂಗ್ರೆಸ್ ಆಧಾರರಹಿತ, ಅರ್ಥರಹಿತ ಆರೋಪಗಳನ್ನು ಮಾಡಿದೆ ಎಂದರು.
Next Story