ಸೋಮವಾರಪೇಟೆ: ವಿನಾಕಾರಣ ಗುಂಪಿನಿಂದ ಹಲ್ಲೆ ಆರೋಪ; ದೂರು ದಾಖಲು
ಸೋಮವಾರಪೇಟೆ,ಸೆ.7: ವಿನಾಕಾರಣ ವ್ಯಕ್ತಿಯೋರ್ವರ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾದಾಪುರ ಗ್ರಾಮ ಪಂಚಾಯತ್ ಸದಸ್ಯ ಪ್ರಸನ್ನ, ಕುಂಬೂರು ಗ್ರಾಮದ ನಂದ, ವಿಕ್ರಂ, ಶಂಭು ಅವರುಗಳು ಹಲ್ಲೆ ನಡೆಸಿದ್ದು, ಬೆದರಿಕೆ ಹಾಕಿದ್ದಾರೆ ಎಂದು ಕುಂಬೂರು ಗ್ರಾಮದ ಮಂಜು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story