ಭಟ್ಕಳದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಸ್ಥಗಿತ
ಭಟ್ಕಳ, ಸೆ. 10: ಭಾರತ್ ಬಂದ್ ಕರೆಗೆ ಭಟ್ಕಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಂದ್ ಶಾಂತಿಯುತವಾಗಿತ್ತು. ಇಲ್ಲಿನ ತಂಝೀಮ್ ಸಂಸ್ಥೆಯು ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು.
ಹೆದ್ದಾರಿ ಹಾಗೂ ಶಮ್ಸುದ್ದೀನ್ ವೃತ್ತದಲ್ಲಿ ಒಂದೆರಡು ಅಂಗಡಿಗಳು ತೆರೆದುಕೊಂಡಿದ್ದು, ಸಾರಿಗೆ ಸಂಪೂರ್ಣ ಸ್ಥಗಿತಗೊಂಡಿತ್ತು ಸ್ಥಳೀಯ ಕೆಲ ಆಟೋ ಚಾಲಕರು ತಮ್ಮ ಆಟೋ ರಿಕ್ಷಾವನ್ನು ರಸ್ತೆಗಿಳಿಸಿದ್ದು ಅದರಲ್ಲಿ ಪ್ರಯಾಣಿಕರು ಸಿಗದೆ ಪರದಾಡುತ್ತಿದ್ದರು.
ತರಕಾರಿ, ಮೀನು ಮಾರಟಗಾರರು ಎಂದಿನಂತೆ ತಮ್ಮ ವ್ಯಾಪಾರ ವಹಿವಾಟು ನಡೆಸಲು ಪಟ್ಟಣಕ್ಕೆ ಬಂದಿದ್ದರೂ ಕೊಂಡುಕೊಳ್ಳುವವರಿಲ್ಲದೆ ಗ್ರಾಹಕರಿಗಾಗಿ ಕಾದುಕುಳಿತುಕೊಂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ಬಂದೋಬಸ್ತ ವ್ಯವಸ್ಥೆ ಮಾಡಿದ್ದರು.
Next Story