ಕಾಪು: ಮೃತ ಕುಟುಂಬಕ್ಕೆ ಮೆಸ್ಕಾಂನಿಂದ ಪರಿಹಾರ
ಕಾಪು, ಸೆ.10: ವಿದ್ಯುತ್ ಅಘಾತದಿಂದ ಮೃತಪಟ್ಟ ಪೆರ್ಣಂಕಿಲ ಗ್ರಾಮದ ಗುಂಡುಪಾದೆಯ ಜಲಜ ಮತ್ತು ಸುಮತಿ ಕುಟುಂಬಕ್ಕೆ ಮೆಸ್ಕಾಂನಿಂದ ಪರಿಹಾರ ಬಿಡುಗಡೆಯಾಗಿದೆ.
ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮೃತರ ಕುಟುಂಬದ ಸದಸ್ಯ ರಮೇಶ್ ನಾಯಕ್ ಅವರಿಗೆ ಪರಿಹಾರದ ಚೆಕ್ನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಪೆರ್ಣಂಕಿಲ ಸದಾನಂದ ಪ್ರಭು, ಮೆಸ್ಕಾಂ ಮೂಡುಬೆಳ್ಳೆ ಶಾಖಾಧಿಕಾರಿ ಅಜಯ್, ಸಹಾಯಕ ಇಂಜಿನಿಯರ್ ಮಾರ್ತಾಂಡಪ್ಪ ಮಣಿಪಾಲ, ಗುತ್ತಿಗೆದಾರರಾದ ಕೃಷ್ಣ ಕುಲಾಲ್, ಉಮೇಶ್ ಶೆಟ್ಟಿ ಹಿರಿಯಡ್ಕ, ತಾಪಂ ಸದಸ್ಯರಾದ ಸಂಧ್ಯಾ ಕಾಮತ್, ವಿನಯ್, ಹರೀಶ್ ಸಾಲಿಯಾನ್, ಸುನಿತಾ ನಾಯ್ಕ, ಸರೋಜ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
Next Story