ಕೇರಳ ಪೊಲೀಸರ ವಿರುದ್ಧ ಅಲ್ಪಸಂಖ್ಯಾತರ ಹಕ್ಕುಗಳ ಆಯೋಗದಿಂದ ಪ್ರಕರಣ ದಾಖಲು
ತಿರುವನಂತಪುರ, ಸೆ. 10: ಜಲಾಂಧರದ ಬಿಷಪ್ ಫ್ರಾಂಕೋ ಮುಲಕ್ಕಲ್ ಮೇಲೆ ಅತ್ಯಾಚಾರ ಆರೋಪ ಹೊರಿಸಿದ ಕೇರಳ ಪೊಲೀಸರ ವಿರುದ್ಧ ರಾಜ್ಯ ಅಲ್ಪಸಂಖ್ಯಾತ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿದೆ. ಆದಷ್ಟು ಬೇಗ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ವರಿಷ್ಠ ಲೋಕನಾಥ್ ಬೆಹೆರಾ ಹಾಗೂ ಕೊಚ್ಚಿ ವಲಯ ಐಜಿ ವಿಜಯ್ ಎಸ್. ಸಖಾರೆ ಅವರಲ್ಲಿ ಆಯೋಗ ಸೂಚಿಸಿದೆ.
ಬಿಷಪ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವ ಬಗ್ಗೆ ಮಾದ್ಯಮ ವರದಿ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಆಯೋಗದ ಅಧಿಕಾರಿ ತಿಳಿಸಿದ್ದಾರೆ. ಬಿಷಪ್ ಅವರನ್ನು ಪೊಲೀಸರು ಬಂಧಿಸಿರುವುದರ ವಿರುದ್ಧ ಸಾರ್ವಜನಿಕ ಆಕ್ರೋಶ ತೀವ್ರಗೊಳ್ಳುತ್ತಿರುವ ಸಂದರ್ಭ ಆಯುಕ್ತರ ಈ ಆದೇಶ ಹೊರಬಿದ್ದಿದೆ.
Next Story