ಸಚಿನ್ ತೆಂಡೂಲ್ಕರ್ ವಿರುದ್ಧ ನಟಿ ಶ್ರೀ ರೆಡ್ಡಿ ಗಂಭೀರ ಆರೋಪ
ಹೊಸದಿಲ್ಲಿ, ಸೆ.12: ತೆಲುಗು ಚಿತ್ರರಂಗದ ಪ್ರಸಿದ್ಧ ನಟರಾದ ಪವನ್ ಕಲ್ಯಾಣ್, ನಾನಿ, ರಾಘವ ಲಾರೆನ್ಸ್ ವಿರುದ್ಧ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದ ನಟಿ ಶ್ರೀ ರೆಡ್ಡಿ ಇದೀಗ ವಿಶ್ವ ಕಂಡ ಶ್ರೇಷ್ಟ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
“ಸಚಿನ್ ತೆಂಡೂಲ್ಕರನ್ ಎಂಬ ರೊಮ್ಯಾಂಟಿಕ್ ವ್ಯಕ್ತಿ ಹೈದರಾಬಾದ್ ಗೆ ಬಂದಿದ್ದಾಗ, ‘ಚಾರ್ಮಿಂಗ್’ ಯುವತಿಯೊಬ್ಬಳು ಅವರೊಂದಿಗೆ ರೊಮ್ಯಾನ್ಸ್ ಮಾಡಿದ್ದರು. ಹೈ ಪ್ರೊಫೈಲ್ ಚಾಮುಂಡೇಶ್ವರ್ ಸ್ವಾಮಿ ಮಧ್ಯವರ್ತಿಯಾಗಿದ್ದರು” ಎಂದು ರೆಡ್ಡಿ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.
ತೆಲುಗು ಮತ್ತು ತಮಿಳು ಇಂಡಸ್ಟ್ರಿಯ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗಪಡಿಸುತ್ತೇನೆ ಎಂದಿದ್ದ ಶ್ರೀ ರೆಡ್ಡಿ ನಂತರ ಪವನ್ ಕಲ್ಯಾಣ್, ನಾನಿ, ನಿರ್ದೇಶಕ ಮುರುಗದಾಸ್, ರಾಘವ ಲಾರೆನ್ಸ್ ಸೇರಿ ಹಲವರ ವಿರುದ್ಧ ಪೋಸ್ಟ್ ಗಳನ್ನು ಹಾಕಿದ್ದರು. ಆದರೆ ಇದೀಗ ಸಚಿನ್ ತೆಂಡೂಲ್ಕರ್ ಬಗ್ಗೆ ಶ್ರೀ ರೆಡ್ಡಿಯವರ ಪೋಸ್ಟ್ ಹಲವರನ್ನು ಕೆರಳಿಸಿದೆ. ಶ್ರೀ ರೆಡ್ಡಿ ಪೋಸ್ಟ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.