ಗಣ್ಯರಿಂದ ಚೌತಿ ಹಬ್ಬದ ಶುಭಾಶಯಗಳು
ಮಂಗಳೂರು, ಸೆ.5: ನಾಡಿನ ಜನತೆಗೆ ಚೌತಿ ಹಬ್ಬದ ಸಂದರ್ಭದಲ್ಲಿ ಸಚಿವರು, ಶಾಸಕರು ಶುಭ ಹಾರೈಸಿದ್ದಾರೆ.
ಅಮೆರಿಕಾ ಪ್ರವಾಸದಲ್ಲಿರುವ ರಾಜ್ಯ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರು, ವಿಘ್ನೇಶ್ವರನ ಕೃಪಾಕಟಾಕ್ಷ ಸದಾ ನಮ್ಮೆಲ್ಲರ ಮೇಲಿರಲಿ. ನಾಡಿನ ಎಲ್ಲೆಡೆ ಅಭಿವೃದ್ಧಿ ಪಸರಿಸಲಿ. ಹಬ್ಬವು ಎಲ್ಲಿರಿಗೆ ಒಳಿತನ್ನು ತರಲಿ ಎಂದು ತಮ್ಮ ಸಂದೇಶದಲ್ಲಿ ಹಾರೈಸಿದ್ದಾರೆ.
ಆಹಾರ ಸಚಿವ ಯು.ಟಿ. ಖಾದರ್ ಅವರು, ಚೌತಿ ಹಬ್ಬವು ರಾಜ್ಯಕ್ಕೆ ನೆಮ್ಮದಿ, ಶಾಂತಿಯನ್ನು ತರಲಿ. ಸರ್ವ ಹಿಂದೂ ಬಾಂಧವರಿಗೂ ಈ ಹಬ್ಬ ಮಂಗಳಕರವಾಗಲಿ ಎಂದು ಶುಭ ಹಾರೈಸಿದ್ದಾರೆ.
ಶಾಸಕರಾದ ಬಿ.ಎ.ಮೊಯ್ದಿನ್ ಬಾವಾ, ಜೆ.ಆರ್.ಲೋಬೊ, ಮನಪಾ ಮೇಯರ್ ಹರಿನಾಥ್, ದ.ಕ. ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ ಜನತೆಗೆ ಗಣೇಶೋತ್ಸವದ ಶುಭಾಶಯ ಕೋರಿದ್ದಾರೆ.
Next Story