ಶಾಸಕ ಮೊಯ್ದಿನ್ ಬಾವಾರಿಂದ ಹೊಸ ವರ್ಷಾಚರಣೆ
ಸುರತ್ಕಲ್, ಜ.2: ಇಲ್ಲಿನ ಮಧ್ಯ ದಲಿತ ಕಾಲನಿಯಲ್ಲಿ ಶಾಸಕ ಮೊಯ್ದಿನ್ ಬಾವ ಸಿಹಿ ಹಂಚಿ, ಕಾಲನಿಯ ಪ್ರತೀ ಮನೆಗೆ ಸೀರೆ ವಿತರಿಸುವ ಮೂಲಕ ವಿಶೇಷವಾಗಿ ಹೊಸವರ್ಷ ಆಚರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ರಾಜ್ಯ ಸರಕಾರ ಅಲ್ಪ ಸಂಖ್ಯಾತರು, ದಲಿತರು ಹಿಂದಿಳಿದ ವರ್ಗಗಳ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಎಲ್ಲರೂ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಬಶೀರ್ ಅಹ್ಮದ್, ಸದಾನಂದ ಶೆಟ್ಟಿ, ರಮಾನಂದ ಮತ್ತಿತರರು ಉಪಸ್ಥಿತರಿದ್ದರು.
Next Story