ಮೇ 12: ‘ಸಾಹಿತ್ಯತ್ತೊ ಒಸರ್- 2024’ ಕಾರ್ಯಕ್ರಮ

Update: 2024-05-09 16:58 GMT

ಮಂಗಳೂರು, ಮೇ 9: ‘ಬ್ಯಾರಿ ಎಲ್ತ್‌ಗಾರ್ತಿಮಾರೊ ಕೂಟ’ದ ವತಿಯಿಂದ ನಗರದ ಬಲ್ಮಠದಲ್ಲಿರುವ ಸಹೋದಯ ಸಭಾಂಗಣದಲ್ಲಿ ಮೇ 12ರಂದು ಮಧ್ಯಾಹ್ನ 2ಕ್ಕೆ ‘ಸಾಹಿತ್ಯತ್ತೊ ಒಸರ್- 2024’ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ‘ಪಾಟೆಲ್ತ್‌ರೊ ಒಸರ್’-ಬಹುಭಾಷಾ ಕವಿಗೋಷ್ಠಿ ಮತ್ತು ‘ಪಲಕತ್ತೊ ಒಸರ್’ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News