ಮೇ 5: ವಿಟ್ಲದಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರ

Update: 2024-05-04 18:00 GMT

ಮಂಗಳೂರು, ಮೇ 4: ಎಆರ್‌ಎಂಸಿ ಐವಿಎಫ್ ಫರ್ಟಿಲಿಟಿ ಸೆಂಟರ್ ಮಂಗಳೂರು ಮತ್ತು ವಿಟ್ಲದ ಸುರಕ್ಷಾ ಹೆಲ್ತ್ ಸೆಂಟರ್‌ನ ಆಶ್ರಯದಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರ ಮೇ 5 ರಂದು ಬೆಳಗ್ಗೆ 10 ರಿಂದ 2ರ ತನಕ ವಿಟ್ಲದ ಸುರಕ್ಷಾ ಹೆಲ್ತ್ ಸೆಂಟರ್‌ನಲ್ಲಿ ನಡೆಯಲಿದೆ.

ಎಆರ್‌ಎಂಸಿ ಐವಿಎಫ್ ಫರ್ಟಿಲಿಟಿ ಸೆಂಟರ್‌ನ ಮುಖ್ಯ ಐವಿಎಫ್ ತಜ್ಞ ಡಾ. ಗೌರವ್ ಗುಜರಾತಿ, ವಿಟ್ಲ ಸುರಕ್ಷಾ ಹೆಲ್ತ್ ಸೆಂಟರ್‌ನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಗೀತಾ ಪ್ರಕಾಶ್ ಈ ಶಿಬಿರದಲ್ಲಿ ಉಚಿತವಾಗಿ ಸಲಹೆ ನೀಡಲಿರುವರು. ಯಾವುದೇ ಸಮಸ್ಯೆಗಳಿದ್ದಲ್ಲಿ ಇವರನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 08255 -239916, 9611186196 ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News