ಉಳ್ಳಾಲ: ತಾಜುಲ್ ಫುಖಹಾಅ್' ಮದ್ರಸ ಉದ್ಘಾಟನೆ

Update: 2024-04-28 13:19 GMT

ಉಳ್ಳಾಲ: ಬುಖಾರಿ ಎಜುಕೇಶನಲ್ ಮತ್ತು ಚಾರಿಟೇಬಲ್ ಸೆಂಟರ್ ಕಿನ್ಯ ವತಿಯಿಂದ ಕೂಡಾರ ಗೌಸಿಯ ನಗರದಲ್ಲಿ ನೂತನವಾಗಿ ನಿರ್ಮಿಸಿದ ತಾಜುಲ್ ಫುಖಹಾಅ್ ಮದ್ರಸ ಕಟ್ಟಡವನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಧಾರ್ಮಿಕ ಲೌಕಿಕ ಶಿಕ್ಷಣವು ಮುಸ್ಲಿಮರ ಬದುಕಿಗೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಮರ್ಹೂಂ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ಮತ್ತು ನಾನು ಬಹಳಷ್ಟು ಅನ್ಯೋನ್ಯತೆ, ಸ್ನೇಹದ ಬಾಂಧವ್ಯ ದಿಂದ ಬದುಕಿದವರು. ಆದ್ದರಿಂದ ತಾಜುಲ್ ಫುಖಹಾಅ್ ರವರ ನಾಮಧೇಯದ ಮದ್ರಸ ಉದ್ಘಾಟನೆ ಮಾಡಿರುವುದನ್ನು ಮುಕ್ತ ಕಂಠದಿಂದ ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಸಯ್ಯಿದ್ ಅಲವಿ ತಂಙಳ್ ಮೀಂಪ್ರಿ, ಕಣ್ಣಂಗಾರ್ ಹಾಜಿ ಎಚ್.ಬಿ ಮುಹಮ್ಮದ್, ಕಿನ್ಯ ಕೇಂದ್ರ ಜುಮುಅ ಮಸ್ಜಿದ್ ಅಧ್ಯಕ್ಷ ಹಾಜಿ ಕೆ.ಸಿ ಇಸ್ಮಾಈಲ್, ಪನೀರ್ ಜುಮುಅ ಮಸ್ಜಿದ್ ಅಧ್ಯಕ್ಷ ಹುಸೈನ್ ಹಾಜಿ,ಕೆ.ಎಂ ಮೂಸ ಹಾಜಿ ಖುತುಬಿ ನಗರ, ಮದ್ರಸ ನಿರ್ಮಾಣ ಸಮಿತಿ ಅಧ್ಯಕ್ಷ ಎಲಿಮಲೆ ಅಬ್ಬಾಸ್ ಹಾಜಿ, ಬುಖಾರಿ ಎಜುಕೇಶನಲ್ ಮತ್ತು ಚಾರಿಟೇಬಲ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಕೆ.ಎಚ್ ಇಸ್ಮಾಈಲ್ ಸಅದಿ, ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಕೋಶಾಧಿಕಾರಿ ಅಶ್ರಫ್ ಸಖಾಫಿ, ನಾಯಕರಾದ ಇಝ್ಝುದ್ದೀನ್ ಅಹ್ಸನಿ,ವಿ.ಎ ಮುಹಮ್ಮದ್ ಮುಸ್ಲಿಯಾರ್, ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಕೆ.ಎಂ ಮುಸ್ತಫಾ ನಯೀಮಿ, ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಪರಮಾಂಡ ಇಸ್ಮಾಈಲ್ ಹಾಜಿ, ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಸಾಗ್, ಜಿಲ್ಲಾ ಕಾರ್ಯದರ್ಶಿ ಎಂಕೆಎಂ ಇಸ್ಮಾಈಲ್ ಮೀಂಪ್ರಿ, ಎಸ್,ವೈ,ಎಸ್ ರಾಜ್ಯ ಸಮಿತಿ ಇಸಾಬ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಮಾಲಿಕಿ, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್,ದ.ಕ ಕೆಡಿಪಿ ಸದಸ್ಯ ಅಬ್ದುಲ್ ಹಮೀದ್ ಪಾಲಡಿ, ಕಿನ್ಯ ಗ್ರಾಮ ಪಂಚಾಯತ್ ಸದಸ್ಯ ಇಸ್ಮಾಈಲ್ ಫಯಾಝ್ ಕಿನ್ಯ, ಬುಖಾರಿ ಜುಮುಅ ಮಸ್ಜಿದ್ ಖತೀಬ್ ಅಬೂಬಕರ್ ಸಿದ್ದೀಕ್ ಫಾಳಿಲಿ, ನೂರುಲ್ ಉಲಮಾ ಮದ್ರಸದ ಸದರ್ ಮುಅಲ್ಲಿಂ ಅಬ್ದುಲ್ ಅಝೀಝ್ ಸಅದಿ, ಸ್ಥಳೀಯ ಇಮಾಂ ಸಲೀಖ್ ಸಖಾಫಿ,ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್, ವಯನಾಡ್ ಉಸ್ತಾದ್, ಕರ್ನಾಟಕ ಮುಸ್ಲಿಂ ಜಮಾಅತ್ ಮುಡಿಪು ಝೋನ್ ಅಧ್ಯಕ್ಷ ಆಲಿ ಕುಂಞಿ ಪಾರೆ, ಆದಂ ಲತೀಫಿ ಎಸ್,ವೈ,ಎಸ್ ದೇರಳಕಟ್ಟೆ ಝೋನ್ ಕೋಶಾಧಿಕಾರಿ ಉಸ್ಮಾನ್ ಝುಹ್ರಿ ಕುರಿಯ ಮತ್ತಿತರರು ಉಪಸ್ಥಿತರಿದ್ದರು.

ಬುಖಾರಿ ಎಜುಕೇಶನಲ್ ಮತ್ತು ಚಾರಿಟೇಬಲ್ ಸೆಂಟರ್ ಕಿನ್ಯ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಸ್ವಾಗತಿಸಿದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News