ಮಂಗಳೂರು: ಲಾರಿಗಳ ನಡುವೆ ಅಪಘಾತ: ಚಾಲಕನಿಗೆ ಗಂಭೀರ ಗಾಯ

Update: 2024-04-28 15:40 GMT

ಸುರತ್ಕಲ್: ಲಾರಿಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ‌ ನಿಯಂತ್ರಣ ಕಳೆದುಕೊಂಡ ಲಾರಿಯೊಂದು ಮಾರ್ಬಲ್ ಅಂಗಡಿವೊಂದಕ್ಕೆ ಢಿಕ್ಕಿ ಹೊಡೆರುವ ಘಟನೆ ಬೈಕಂಪಾಡಿ ಧ್ವಾರ ಹೋಟೆಲ್ ಬಳಿ ರವಿವಾರ ವರದಿಯಾಗಿದೆ.

ಅಪಘಾತದಲ್ಲಿ ಮೀನು ಸಾಗಾಟದ ಲಾರಿಯ ಚಾಲಕ ನೌಫಲ್ ಎಂಬವರಿಗೆ ಗಾಯಗಳಾಗಿದ್ದು, ಲಾರಿಯಲ್ಲಿ ಸಿಲುಕಿದ್ದ ಆತನನ್ನು ಸಾರ್ವಜನಿಕರು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಂಗಳೂರು ಕಡೆಯಿಂದ ಉಡುಪಿಗೆ ಸಂಚರಿಸುತ್ತಿದ್ದ ಲಾರಿಗೆ ಮೀನು ಸಾಗಾಟ ಮಾಡುತ್ತಿದ್ದ ಲಾರಿ ಹಿಂದಿನಿಂದ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಅಪಘಾತದ ರಭಸಕ್ಕೆ ಲಾರಿಯು ರಸ್ತೆ ಪಕ್ಕದ ಗಣೇಶ್ ಮಾರ್ಬಲ್ ಅಂಗಡಿಗೆ ಗುದ್ದಿದ್ದು, ಲಕ್ಷಾಂತರ ರೂ.‌ಮೌಲ್ಯದ ಮಾರ್ಬಲ್ ಗಳು ತುಂಡಾಗಿವೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News