ಕಥಾ ಸಂಕಲನ ‘ತಿರುವು’ ಬಿಡುಗಡೆ
Update: 2024-04-29 17:25 GMT
ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶನ ಪತ್ರಿಕೆ ವತಿಯಿಂದ ನಡೆದ 40ನೇಯ ಸರಣಿ ಕೃತಿ ವೀಣಾ ರಾವ್ ವಿಟ್ಲ ಅವರ ಕಥಾ ಸಂಕಲನ ‘ತಿರುವು ’ ಇದರ ಬಿಡುಗಡೆ ಮಂಗಳೂರು ಪತ್ರಿಕಾ ಭವನದಲ್ಲಿ ಸೋಮವಾರ ನಡೆಯಿತು.
ತಿರುವು ಕಥಾ ಸಂಕಲನವನ್ನು ನಿವೃತ್ತ ಶಿಕ್ಷಕರು, ಸಾಹಿತಿ, ಕೆ.ರವೀಂದ್ರ ರೈ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತನ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಅಗರಿ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ.ಅರುಣಾ ನಾಗರಾಜ್ ಕೃತಿ ಪರಿಚಯಿಸಿದರು, ಲೇಖಕಿ ವೀಣಾ ರಾವ್ ವಿಟ್ಲ ಉಪಸ್ಥಿತರಿದ್ದರು.
ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ ಮಾಲತಿ ಶೆಟ್ಟಿ ಸ್ವಾಗತಿಸಿ , ಶಿಕ್ಷಕಿ ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು.