ಮುಲ್ಕಿ: ಟಿಪ್ಪರ್‌ ಢಿಕ್ಕಿ; ಯುವಕ ಮೃತ್ಯು

Update: 2024-04-30 16:17 GMT

ಮುಲ್ಕಿ: ಇಲ್ಲಿನ ಪಾವಂಜೆ ನಂದಿನಿ ನದಿಯ ತಟದಲ್ಲಿ ಟಿಪ್ಪರ್‌ ಢಿಕ್ಕಿಹೊಡೆದು ಯುವಕನೋರ್ವ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ವರದಿಯಾಗಿದೆ.

ಮುಲ್ಕಿಯ ನಿವಾಸಿ ರಂಗನಾಥ (24) ಮೃತ ಯುವಕ ಎಂದು ತಿಳಿದು ಬಂದಿದೆ.

ಪಾವಂಜೆ ಸೇತುವೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ. ಲಾರಿಯ ಚಾಲಕ ಸುಕೇಶ್ ಪೂಜಾರಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ರಂಗನಾಥ ಅವರಿಗೆ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. 

ಘಟನೆಗೆ ಸಂಬಂಧಿಸಿ ಮೃತ ಯುವಕ ರಂಗನಾಥ ಅವರ ತಂದೆ ಹನುಮಪ್ಪ ಎಚ್.‌ ಗೊರಜನಾಳ ಎಂಬವರು ಮಂಗಳೂರು ನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News