ಸುನ್ನತ್ ಕೆರೆ ಮಸೀದಿಯ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

Update: 2024-05-05 11:47 GMT

ಅಬ್ದುಲ್ ಹಕೀಂ, ಕಲಂದರ್ ಬಿ.ಎಚ್, ಅಬ್ಬಾಸ್ ಹಾಜಿ

ಸುನ್ನತ್ ಕೆರೆ: ಬುಸ್ತಾನುಲ್ ಉಲೂಂ ಸೆಕೆಂಡರಿ ಮದರಸ ಸುನ್ನತ್ ಕೆರೆಯ ಸಭಾಂಗಣದಲ್ಲಿ ಜಮಾಅತ್ ಖತೀಬ್ ಎಂ.ಕೆ ಅಬುಬಕ್ಕರ್ ಸಿದ್ದೀಕ್ ಹಿಮಮಿ ಅಲ್ ಫುರ್ಖಾನಿ ರಶಾದಿ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು.

ಕಾರ್ಯಕ್ರಮದಲ್ಲಿ ಯಂಗ್-ಮೆನ್ಸ್ ಪ್ರ. ಕಾರ್ಯದರ್ಶಿ ಜಿ.ಎಂ ತಾಜುದ್ದೀನ್ ಸ್ವಾಗತಿಸಿದರು. ಜಮಾಅತ್ ಪ್ರ.ಕಾರ್ಯದರ್ಶಿ ಸಮೀರ್ ಪ್ಲಾಸ್ಟಿಕ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು.

ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಹಾಜಿ, ಅಧ್ಯಕ್ಷರಾಗಿ ಅಬ್ದುಲ್ ಹಕೀಂ, ಪ್ರ.ಕಾರ್ಯದರ್ಶಿಯಾಗಿ ಕಲಂದರ್ ಬಿ.ಎಚ್, ಕೋಶಾಧಿಕಾರಿಯಾಗಿ ಅಬ್ಬಾಸ್ ಹಾಜಿ, ಉಪಾಧ್ಯಕ್ಷರಾಗಿ ಸ್ವಾದಿಕ್ ಸಾಹೇಬ್, ಇಲ್ಯಾಸ್ ಎಸ್.ಕೆ, ಜೊ.ಕಾರ್ಯದರ್ಶಿಯಾಗಿ ಇಕ್ಬಾಲ್ ಫಿಶ್ ಹಾಗೂ ಲೆಕ್ಕಪರಿಶೋಧಕರಾಗಿ ಜಿ.ಎಂ ತಾಜುದ್ದೀನ್ ಆಯ್ಕೆಯಾದರು. ನೂತನ ಕಮಿಟಿಗೆ ಬುಕ್ ಲೆಟರ್ ಹಸ್ತಾಂತರ ಮಾಡುವ ಮೂಲಕ ನೂತನ ಕಮಿಟಿಗೆ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News