ತುಳುವರು ನಿರ್ಮಿಸಿದ "ಪೀಡಿತ್" ಹಿಂದಿ ಸಿನೆಮಾ ನೈಜತೆಗೆ ಕೈಗನ್ನಡಿ : ಸಾಹಿತಿ ಡಾ.ಮೀನಾಕ್ಷಿ ರಾಮಚಂದ್ರ

Update: 2024-05-05 16:51 GMT

ಮಂಗಳೂರು: ತುಳುನಾಡಿನ ಉತ್ಸಾಹಿ ಯುವಕರೇ ಸೇರಿಕೊಂಡು ನಿರ್ಮಿಸಿರುವ "ಪೀಡಿತ್" ಹಿಂದಿ ಸಿನೆಮಾವು ನಮ್ಮ ಸಮಾಜದಲ್ಲಿನ ನೈಜತೆಗೆ ಕೈಗನ್ನಡಿಯಾಗಿದೆ ಎಂದು ಕಲಾ ಸಂಘಟಕಿ, ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಹೇಳಿದ್ದಾರೆ.

ಅವರು ಮಂಗಳೂರಿನ ಬಿಗ್ ಸಿನೆಮಾ ಮಾಲ್‌ನಲ್ಲಿ ಶ್ರೀಗುರು ನಮನ ಸಂತೃಪ್ತಿ ತಂಡದಿಂದ ನಿರ್ಮಾಣಗೊಂಡಿರುವ "ಪೀಡಿತ್" ಹಿಂದಿ ಸಿನೆಮಾದ ವಿಶೇಷ ಉಚಿತ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೀಡಿತ್ ಸಿನೆಮಾದಂತೆ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡುವಂತಹ ವಾತಾವರಣ ಸಿನೆಮಾ ಕ್ಷೇತ್ರದಲ್ಲಿ ನಿರ್ಮಾಣ ವಾಗಬೇಕು. ತಂತ್ರಜ್ಞತೆಗೆ ಹಾಗೂ ಅಭಿನಯಕ್ಕೆ ವಿಶೇಷ ಆಸ್ಪದ ನೀಡಿರುವ ಈ ಸಿನೆಮಾವು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳಿಸುವಂತಾಗಲಿ, ತುಳು ಚಿತ್ರರಂಗದ ಮೂಲಕ ಹಿಂದಿ ಭಾಷೆಯಲ್ಲಿ ನಿರ್ಮಿಸಿರುವ ಈ ಚಿತ್ರವನ್ನು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ತಲುಪಿಸುವ ಕೆಲಸ ನಡೆಯಬೇಕೆಂದು ಅವರು ನುಡಿದರು‌.

ತುಳು ಸಿನೆಮಾ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್‌ನ ನಿರ್ಮಾಪಕ ಆನಂದ ಎನ್. ಬಂಟ್ವಾಳ ಶುಭ ಹಾರೈಸಿದರು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಶೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಅಧ್ಯಕ್ಷ ಪದ್ಮಪ್ರಸಾದ್ ಜೈನ್ ಅಧ್ಯಕ್ಷತೆ ಯನ್ನು ವಹಿಸಿ ಮಾತನಾಡಿದರು‌.

ಮನಪಾದ ಮಾಜಿ ಸದಸ್ಯ ಪ್ರಶಾಂತ್ ಆಳ್ವಾ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಶೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಕಾರ್ಯಕ್ರಮ ನಿರೂಪಕಿ ಡಾ. ಪ್ರಿಯಾ ಹರೀಶ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಚೇತಕ್ ಪೂಜಾರಿ ಮತ್ತು ಸಂತೋಷ್ ಅಂಚನ್ ಕಾರ್ಕಳ, ಮುಂಬೈಯ ಉದ್ಯಮಿ ಸತ್ಯಶಂಕರ್ ನಾಯ್ಕ್, ಕಲಾ ವಿಮರ್ಷಕ ನಾಗರಾಜ ಸುವರ್ಣ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಸಹಕಾರಿ ಸಂಘದ ಮೂಲ್ಕಿ ವಲಯದ ನಿರ್ದೇಶಕ ಮೋಹನ್ ಭಟ್ ಹಳೆಯಂಗಡಿ, ಕಲಾ ಪೋಷಕ ತಾರಾನಾಥ ಕೋಟ್ಯಾನ್ ಪಲಿಮಾರು, ಚಿತ್ರದ ಸಹ ನಿರ್ಮಾಪಕ ಸುರೇಶ್ ಬಟ್ಟೆಕಲ್ ವರ್ಕಾಡಿ, ಸಮಾಜ ಸೇವಕ ಧರ್ಮಾನಂದ ಶೆಟ್ಟಿಗಾರ್ ತೋಕೂರು ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ನಿರ್ದೇಶಕ ದೇವಿಪ್ರಕಾಶ್ ಸ್ವಾಗತಿಸಿದರು, ಛಾಯಾಗ್ರಾಹಕ ಹರೀಶ್ ಪಿ. ಕೋಟ್ಯಾನ್ ವಂದಿಸಿದರು, ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News