ತಣ್ಣೀರುಬಾವಿ ಕಡಲ‌ ಕಿನಾರೆಯಲ್ಲಿ ಮೃತದೇಹ ಪತ್ತೆ

Update: 2024-05-06 17:31 GMT

ಪಣಂಬೂರು: ಇಲ್ಲಿನ ತಣ್ಣೀರು ಬಾವಿ ಕಡಲ‌ಕಿನಾರೆಯಲ್ಲಿ ಮೃತ ದೇಹವೊಂದು ಪತ್ತೆಯಾಗಿದೆ.

ಮಂಗಳೂರು, ಬೋಳಾರ ಮುಳಿಹತ್ಲು ನಿವಾಸಿ ಸುಲೈಮಾನ್ ಎಂಬವರ ಪುತ್ರ ಸರ್ಪರಾಝ್ ನವಾಝ್ (44) ಎಂಬವರ‌ ಮೃತದೇಹ ಎಂದು ಪಣಂಬೂರು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತದೇಹವು ಸೋಮವಾರ ಮಧ್ಯಾಹ್ನ 1ಗಂಟೆಯ ಸುಮಾರಿಗೆ ಬೀಚ್ ನಲ್ಲಿ ಪತ್ತೆಯಾಗಿದ್ದು, ಬಳಿಕ‌ ಅದನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ‌. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News