ಕಿನ್ಯ: ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ

Update: 2024-05-10 14:13 GMT

ಮಂಗಳೂರು: ಕಿನ್ಯ ರೇಂಜ್ ಸಮಸ್ತ ಮದ್ರಸ ಮ್ಯಾನೇಜಿಮೆಂಟ್ ಅಸೋಸಿಯೇಶನ್ ವತಿಯಿಂದ ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುವ ಕಾರ್ಯಕ್ರಮವು ನಾಟೆಕಲ್‌ನಲ್ಲಿರುವ ರೇಂಜ್ ಕಚೇರಿಯಲ್ಲಿ ನಡೆಯಿತು.

ಎಸ್ಕೆಎಸೆಸ್ಸೆಫ್ ದ.ಕ.ಜಿಲ್ಲಾ ವೆಸ್ಟ್ ಅಧ್ಯಕ್ಷ ಸಯ್ಯದ್ ಅಮೀರ್ ತಂಳ್, ಕಿನ್ಯ ರೇಂಜ್ ಮದ್ರಸ ಮ್ಯಾನೇಜಿಮೆಂಟ್‌ನ ಪಧಾದಿ ಕಾರಿಗಳಾದ ಮೊಯಿದಿನ್ (ಅಬ್ಬುಚ್ಚ) ಕಿನ್ಯ, ಸುಲೈಮಾನ್ ಹಾಜಿ ಅಜಿನಡ್ಕ, ಅಬೂಬಕ್ಕರ್ ದಾರಿಮಿ ಉರುಮನೆ ಅವರನ್ನು ಬೀಳ್ಕೊಡಲಾಯಿತು.

ಈ ಸಂದರ್ಭ ಕಿನ್ಯ ರೇಂಜ್ ಮದ್ರಸ ಮ್ಯಾನೇಜಿಮೆಂಟ್ ಅಧ್ಯಕ್ಷ ಇಬ್ರಾಹಿಂ ಕೊಣಾಜೆ, ಉಪಾಧ್ಯಕ್ಷರಾದ ಬಾವುಚ್ಚ ಮರಾಠಿ ಮೂಲೆ, ಜಿಲ್ಲಾ ಕೌನ್ಸಿಲರ್‌ಗಳಾದ ಅಶ್ರಫ್ ಮಾರಾಠಿಮೂಲೆ, ಎಸ್‌ಕೆಎಸ್‌ಜೆಎಂ ಅಧ್ಯಕ್ಷ ಲತೀಫ್ ದಾರಿಮಿ ರೆಂಜಾಡಿ, ಕಾರ್ಯದರ್ಶಿಗಳಾದ ಎಸ್‌ಬಿ ಹನೀಫ್ ಅಜಿನಡ್ಕ, ಬಶೀರ್ ಅಜಿನಡ್ಕ, ಸದಸ್ಯರಾದ ಪುತ್ತುಬಾವು ಅಸೈ, ಅಹ್ಮದ್ ಉಕ್ಕುಡ, ಹಾಶಿರ್ ಮಂಗಳನಗರ, ಫಾರೂಕ್ ಕಿನ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News