ಸಾಂಸ್ಕೃತಿಕ ವೈವಿಧ್ಯ ಸಮಾವೇಶ: ಸ್ವಾಗತ ಸಮಿತಿ ರಚನೆ

Update: 2016-01-04 15:42 GMT

ಮಂಗಳೂರು,ಜ.5: ಕೋಮುಸೌಹಾರ್ದ ವೇದಿಕೆಯಿಂದ ಜ.30 ರಂದು ನಗರದ ಪುರಭವನದಲ್ಲಿ ನಡೆಯಲಿರುವ ಸಹಬಾಳ್ವೆಯ ಸಾಗರ ಎಂಬ ಬೃಹತ್ ಸಾಂಸ್ಕೃತಿಕ ವೈವಿಧ್ಯ ರಾಷ್ಟೀಯ ಸಮಾವೇಶದ ಪೂರ್ವಭಾವಿ ಸಭೆ ಇತ್ತೀಚೆಗೆ ನಡೆದಿದ್ದು ಸಭೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

    ಗೌರವಾಧ್ಯಕ್ಷರಾಗಿ ಖ್ಯಾತ ರಂಗಕರ್ಮಿ ಸದಾನಂದ ಸುವರ್ಣ, ಅಧ್ಯಕ್ಷರಾಗಿ ಪ್ರಗತಿಪರ ಚಿಂತಕ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಪ್ರ. ಕಾರ್ಯದರ್ಶಿಯಾಗಿ ಉಮರ್ ಯು ಎಚ್ ಮತ್ತು ಕೋಶಾಧಿಕಾರಿಯಾಗಿ ಸುರೇಶ್ ಭಟ್ ಬಾಕ್ರಬೈಲ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

 ಕರ್ನಾಟಕ ಕೋಮುಸೌಹಾರ್ದ ವೇದಿಕೆಯು ಗಾಂಧಿಹತ್ಯೆಯಾದ ದಿನವಾದ ಜನವರಿ 30 ರಂದು ಸಹಬಾಳ್ವೆ ಸಾಗರ ಎಂಬ ಬೃಹತ್ ಸಾಂಸ್ಕೃತಿಕ ವೈವಿಧ್ಯ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿದ್ದು ಸೂಫಿ, ವಚನ, ಯಕ್ಷಗಾನ, ಬ್ಯಾರಿ ದಫ್ ಹಾಡುಗಳು, ಧಾರ್ಮಿಕ ಸಹಬಾಳ್ವೆ, ವೈಚಾರಿಕ ವಿಚಾರಧಾರೆಗಳನ್ನು ಕಾರ್ಯಕ್ರಮವು ಒಳಗೊಳ್ಳಲಿದೆ. ಅಸಹಿಷ್ಣುತೆಯ ವಿರುದ್ಧ ಪ್ರಶಸ್ತಿ ಹಿಂತಿರುಗಿಸಿದ ಸಾಹಿತಿಗಳು, ಸಾಹಿತಿಗಳು, ಕಲಾವಿದರು, ಹೋರಾಟಗಾರರು, ರಾಜ್ಯ ಹಾಗೂ ಹೊರ ರಾಜ್ಯಗಳ ಸೌಹಾರ್ದಪ್ರಿಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ .

ಸಭೆಯಲ್ಲಿ ಕರ್ನಾಟಕ ಕೋಮುಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಲ್ ಅಶೋಕ್ ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor