ಓ ಮೆಣಸೇ

Update: 2016-02-14 18:34 GMT

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಅಗತ್ಯವಿದೆ.
                       -ಸಿದ್ದರಾಮಯ್ಯ, ಮುಖ್ಯಮಂತ್ರಿ
ಅಷ್ಟಕ್ಕಾಗಿ ಕಾಂಗ್ರೆಸ್‌ನ್ನು ಹತ್ತಿರ ಮಾಡಿಕೊಳ್ಳಬೇಕೆ?

 ---------------------

ಕರ್ನಾಟಕ ಭಯೋತ್ಪಾದಕರ ಸ್ವರ್ಗವಾಗುತ್ತಿದೆ.
                    ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ

ಅಂತೂ ನಿಮ್ಮ ಕನಸು ನನಸಾಗುತ್ತಿದೆ ಅಂತಾಯಿತು.

---------------------

  ಅವರ ಪತ್ನಿಗಿಂತ ನಾನು ಎಚ್.ಡಿ ಕುಮಾರಸ್ವಾಮಿಯವರನ್ನು ಅರ್ಥಮಾಡಿಕೊಂಡಿದ್ದೇನೆ.
                            -ಝಮೀರ್ ಅಹ್ಮದ್, ಶಾಸಕ
ಸವತಿ ಕಾಟ ತಪ್ಪಿದ್ದಲ್ಲ.
---------------------
 ಟಾಪ್‌ಗೇರ್‌ನಲ್ಲಿ ಕೇಂದ್ರ, ರಿವರ್ಸ್ ಗೇರ್‌ನಲ್ಲಿ ರಾಜ್ಯ.
                       -ಅನಂತ್‌ಕುಮಾರ್, ಕೇಂದ್ರ ಸಚಿವ


 ಬರೇ ಗೇರ್ ಇದ್ದರೆ ವಾಹನ ಓಡಲ್ಲ, ಇಂಜಿನ್ ಕೂಡ ಇರಬೇಕು.

---------------------

ಝಮೀರ್ ಅಹ್ಮದ್ ಮೀರ್ ಸಾದಿಕ್ ವರ್ಗಕ್ಕೆ ಸೇರಿದವರು.
                    -ಎಚ್.ಡಿ ದೇವೇಗೌಡ, ಮಾಜಿ ಪ್ರಧಾನಿ
ನಾನು ಜೆಡಿಎಸ್‌ನ ಆ ಕಾಲದ ಟಿಪ್ಪು ಸುಲ್ತಾನ್ ಎಂದರಂತೆ ಸಿದ್ದರಾಮಯ್ಯ.

 ---------------------

ಭಾರತ ಅಸಹಿಷ್ಣು ದೇಶವಲ್ಲ.
              -ತಸ್ಲೀಮಾ ನಸ್ರೀನ್, ವಿವಾದಿತ ಬಾಂಗ್ಲಾ ಲೇಖಕಿ
ನಿಮ್ಮನ್ನು ಈವರೆಗೆ ಸಹಿಸಿದ್ದಕ್ಕೆ ನೀಡಿರುವ ಭಕ್ಷಿಸೇ?

 ---------------------ಕಂಬಳಕ್ಕೆ ಕಾನೂನು ಅಡ್ಡಿಯಾದರೂ ರಾಜ್ಯ ಸರಕಾರ ಅದನ್ನು ಸಡಿಲಗೊಳಿಸುವಲ್ಲಿ ಯಶಸ್ವಿಯಾಗಿದೆ.
                      -ಯು.ಟಿ ಖಾದರ್, ಆರೋಗ್ಯ ಸಚಿವ
ಆರೋಗ್ಯ ಸಚಿವರಿಗೆ ಕಂಬಳದಲ್ಲೇನು ಕೆಲಸ?

 ---------------------

ಜೆಡಿಎಸ್‌ಗೆ ಮದುವೆ ಊಟಕ್ಕಿಂತ ತಿಥಿ ಊಟ ಇಷ್ಟ.
                         -ಸಿದ್ದರಾಮಯ್ಯ, ಮುಖ್ಯಮಂತ್ರಿ
ಜೆಡಿಎಸ್‌ನಲ್ಲಿದ್ದಾಗ ನೀವು ಉಂಡ ತಿಥಿ ಊಟ ಎಷ್ಟು ಎಂದು ಹೇಳಬಹುದೇ?


  ---------------------

ಅಭಿವ್ಯಕ್ತಿ ಸ್ವಾತಂತ್ರವನ್ನು ಲಘುವಾಗಿ ಪರಿಗಣಿಸಬಾರದು.
                        -ಕಮಲ ಹಾಸನ್, ಖ್ಯಾತ ನಟ


 ಬಹುಶಃ ವಿಶ್ವರೂಪಂ ಎರಡನೆ ಭಾಗ ಶೀಘ್ರ ಬಿಡುಗಡೆ ಇರಬೇಕು.

---------------------

ಇಂದು ಆಂಗ್ಲ ಭಾಷೆ ವ್ಯಾಮೋಹ ಹೆಚ್ಚಾಗಿ ಸಂಸ್ಕೃತದ ಕಡೆಗಿನ ಒಲವು ಕಡಿಮೆಯಾಗುತ್ತಿದೆ.
                   -ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಸಂಸ್ಕೃತದಲ್ಲಿ ಹಾಲಿವುಡ್ ಚಿತ್ರಗಳನ್ನು ನಿರ್ಮಿಸಿದರೆ ವ್ಯಾಮೋಹ ಹುಟ್ಟುವ ಸಾಧ್ಯತೆಗಳಿವೆ.

 ---------------------

ಮಾಜಿ ಪ್ರಧಾನಿ ದೇವೇಗೌಡರು ಈ ವಯಸ್ಸಿನಲ್ಲಿ ಸುಳ್ಳು ಹೇಳುತ್ತಿರುವುದು ಸರಿಯಲ.್ಲ
                       -ಡಿ.ಕೆ ಶಿವಕುಮಾರ್, ಇಂಧನ ಸಚಿವ
ಅಂದರೆ ನಿಮ್ಮ ವಯಸ್ಸಿನವರಿಗೆ ಮಾತ್ರ ಸುಳ್ಳು ಹೇಳುವ ಹಕ್ಕಿರುವುದೇ?

 ---------------------ನನಗೆ ಕನಿಷ್ಠ 20 ಮಂದಿ ಮುಸ್ಲಿಮ್ ಗೆಳೆಯರಿದ್ದಾರೆ.
-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ ಚುನಾವಣೆಯ ರಿಪಬ್ಲಿಕ್ ಅಭ್ಯರ್ಥಿ
ಗೆಳೆಯರ ಬೆನ್ನಿಗೇ ಚೂರಿಯೇ?

 ---------------------

ನನಗೆ ರಾಷ್ಟ್ರಪತಿಯಾಗುವ ಇಚ್ಛೆ ಇದೆ.
                        -ಕತ್ರೀನಾ ಕೈಫ್, ಬಾಲಿವುಡ್ ನಟಿ

 ಸೂಕ್ತ ನಿರ್ಮಾಪಕ, ನಿರ್ದೇಶಕರನ್ನು ಹುಡುಕಿದರಾಯಿತು ಬಿಡಿ.
              

  ---------------------

ಲಾಲೂ ಪ್ರಸಾದ್ ಯಾದವ್ ನನ್ನ ಹಳೆಯ ಗೆಳೆಯ.
                               

 -ಶತ್ರುಘ್ನ ಸಿನ್ಹಾ, ಸಂಸದಕಳೆದ ಚುನಾವಣೆಯಲ್ಲಿ ಆ ಕಾರಣಕ್ಕೇ ಅವರಿಗೆ ಸಹಕರಿಸಿದಿರಿ.ಅಲ್ಲವೇ?
              
 ---------------------

ನೀರಾವರಿ ವಿಷಯದಲ್ಲಿ ನನಗಿದ್ದ ಅನುಭವ ದೇವೇಗೌಡರಿಗಿಲ್ಲ.
                            -ಡಾ.ವೀರಪ್ಪ ಮೊಯ್ಲಿ, ಸಂಸದ

 ಇಲ್ಲದ ನದಿಯನ್ನು ತಿರುಗಿಸುವ ಅನುಭವ ಅವರಿಗಿರಲಿಕ್ಕಿಲ್ಲ.
              
 ---------------------

ಕಲಿ ಪುರುಷನ ಆಗಮನ ಸ್ಪಷ್ಟವಾಗಿ ಗೋಚರಿಸುತ್ತಿದೆ.
                -ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

 ನಕಲಿ ಸ್ವಾಮೀಜಿಗಳು ಹೆಚ್ಚುತ್ತಿರುವಾಗ ಕಲಿ ಅವತಾರವಾಗಲೇಬೇಕು.

---------------------

ಕೇಂದ್ರದ ಹಣಕಾಸು ವ್ಯವಸ್ಥೆ ಭದ್ರಕೋಟೆ ಇದ್ದಂತೆ.ಚ್ಟ -ಜಯಂತ್ ಸಿನ್ಹಾ, ಕೇಂದ್ರ ಸಚಿವ

 ಬರೇ ಕೋಟೆ ಮಾತ್ರ ಇದೆ. ಒಳಗಿದ್ದದ್ದೆಲ್ಲ ದೋಚಿ ಆಗಿದೆ.

---------------------

ಪಕ್ಷದ ವರಿಷ್ಠರು ನನಗೆ ಯಾವ ಸ್ಥಾನ ಕೊಟ್ಟರೂ ಬೇಡ ಅನ್ನೋಲ್ಲ.
                               -ರಮ್ಯಾ, ಮಾಜಿ ಸಂಸದೆ

ಕೇಳಿದ ಸ್ಥಾನ ಸಿಗದೇ ಇದ್ದ ಮೇಲೆ ಕೊಟ್ಟದರಲ್ಲಿ ತೃಪ್ತಿ ಪಟ್ಟುಕೊಳ್ಳಬೇಕು.

---------------------

ಕೇಂದ್ರ ಸರಕಾರ ದಿಲ್ಲಿ ಪೊಲೀಸರನ್ನು ಕೇಸರೀಕರಣಗೊಳಿಸುತ್ತಿದೆ.

             -ಮನೀಶ್ ಸಿಸೋಡಿಯಾ, ದಿಲ್ಲಿ ಉಪಮುಖ್ಯಮಂತ್ರಿ

 ಪ್ಯಾಂಟ್‌ನ ಬದಲಿಗೆ ಚಡ್ಡಿ ಧರಿಸಲು ಆದೇಶಿಸುವುದೊಂದು ಬಾಕಿ ಇದೆ.

---------------------

ಕಾಂಗ್ರೆಸ್‌ನಿಂದ ಗಾಂಧಿ ಕನಸು ನನಸು.
                        -ವಿನಯಕುಮಾರ್ ಸೊರಕೆ, ಸಚಿವ

 ಸೋನಿಯಾಗಾಂಧಿ ಕನಸೇ ಅಥವಾ ರಾಹುಲ್‌ಗಾಂಧಿ ಕನಸೇ?
              
 ---------------------

ವಾಸ್ತವದಲ್ಲಿ ವೌನಿ ನಾನಲ್ಲ, ಪ್ರಧಾನಿ ಮೋದಿ.
                    -ಮನಮೋಹನ್ ಸಿಂಗ್, ಮಾಜಿ ಪ್ರಧಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!