×
Ad

ಹಣ-ತೋಳ್ಬಲಗಳ ವಿರುದ್ಧ ಬಿಜೆಪಿ ಗೆಲುವು: ವೈ.ಎ.ನಾರಾಯಣಸ್ವಾಮಿ

Update: 2016-02-16 23:46 IST

ಬೆಂಗಳೂರು, ಫೆ. 16: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾ ವಣೆಯಲ್ಲಿ ಹಣ ಮತ್ತು ತೋಳ್ಬಲದ ವಿರುದ್ಧ ಬಿಜೆಪಿ ಜಯಗಳಿಸಿದ್ದು, ಇದು ಪಕ್ಷ ಕಾರ್ಯಕರ್ತರ ಗೆಲುವು ಎಂದು ಭರ್ಜರಿ ಜಯಭೇರಿ ಭಾರಿಸಿದ ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಇಲ್ಲಿನ ಹೆಬ್ಬಾಳ ಪಶು ವೈದ್ಯಕೀಯ ಕಾಲೇಜು ಆವರಣದಲ್ಲಿನ ಮತ ಎಣಿಕೆ ಕೇಂದ್ರದಲ್ಲಿ ಗೆಲುವು ಸಾಧಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ತಾನು ಯಾವುದೇ ಪರೀಕ್ಷೆಯಲ್ಲಿಯೂ ಅನುತ್ತೀರ್ಣನಾಗಿಲ್ಲ. ಹೆಬ್ಬಾಳದಲ್ಲಿಯೂ ಪ್ರಥಮ ಶ್ರೇಣಿಯಲ್ಲೇ ಆಯ್ಕೆಯಾಗಿದ್ದೇನೆ ಎಂದು ವಿಶ್ಲೇಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News